ರಾಜಕೀಯ
ರೈತರಿಗೆ ಗುಡ್ ನ್ಯೂಸ್ ನೀಡಲು ಎಚ್.ಡಿ.ಕೆ ಸಜ್ಜು..!
ಸುದ್ದಿದಿನ ಡೆಸ್ಕ್ : ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಎಲ್ಲಿಲ್ಲದಂತೆ ಕಾಡುತ್ತಿರುವುದು ರೈತರ ಸಾಲಾಮನ್ನಾದ ವಿಚಾರ.
ಈ ವಿಚಾರವಾಗಿ ಎಚ್.ಡಿ.ಕೆ ಹಿರಿಯರ ಸಲಹೆ ಮೇರೆಯಂತೆ ಕಾಂಗ್ರೆಸ್ ನೊಂದಿಗೆ ಚರ್ಚಿಸಿ ಒಂದು ಅಭಿಪ್ರಾಯಕ್ಕೆ ಬಂದಂತಾಗಿದೆ. ಈ ನಿಟ್ಟಿನಲ್ಲಿ ಎಚ್.ಡಿ.ಕೆ ಮಂಡಿಸಲಿರುವ ಬಜೆಟ್ ನಲ್ಲಿ ರೈತರಸಾಲ ಮನ್ನಾದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಅಂತೆಯೇ ಎರಡು ಹಂತದಲ್ಲಿ ರೈತರ ಸಾಲ ಮನ್ನಾ ಮಾಡುವ ಚಿಂತನೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಹುಮತ ಸಾಬೀತಾಗಿ ನಾವು ಅಧಿಕಾರಕ್ಕೆ ಬಂದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುದು ಎಂಬ ಘೋಷಣೆ ಮಾಡುವುದರ ಮೂಲಕ ರೈತರಿಗೆ ಭರವಸೆ ನೀಡಿತ್ತು. ಆದರೆ ಜೆಡಿಎಸ್ ಗೆ ಸಂಪೂರ್ಣ ಬಹುಮತ ಸಂಪೂರ್ಣ ಸಿಗದ ಕಾರಣ ಕಿಂಗ್ ಮೇಕರ್ ಅನ್ನಿಸಿಕೊಂಡು ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ರಚನೆಯಾಯಿತು.
ಈ ಸಂದರ್ಭ ಎಚ್.ಡಿ.ಕೆ ಗೆ ಸ್ವತಂತ್ರವಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೆ ವಿರೋಧಪಕ್ಷ ಬಿಜೆಪಿಯ ಪ್ರಮುಖ ಟೀಕಾಸ್ತ್ರವಾಗಿ ಇದನ್ನು ಬಳಸಿಕೊಂಡಿದೆ. ಬಿಜೆಪಿ ಹಾಗೂ ರಾಜ್ಯದ ರೈತರಿಗೆ ಏನಾದರೊಂದು ಉತ್ತರಕೊಡಲೇ ಬೇಕಾದ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರ ಚಿಂತಿಸಿ ಬಜೆಟ್ ನಲ್ಲಿ ಸಾಲಮನ್ನಾದ ಬಗ್ಗೆ ತನ್ನ ನಿಲುವನ್ನು ಪ್ರಸ್ತಾಪಿಸಲು ಸಜ್ಜಾಗಿದೆ ಎಂಬ ಮಾಹಿತಿ ಮಾಧ್ಯಮಗಳಿಗೆ ದೊರಕಿದೆ.