ದಿನದ ಸುದ್ದಿ

ವಿಂಟೇಜ್ ಕಾರಿನಲ್ಲಿ ಸವಾರಿ ಮಾಡಿದ ಎಚ್.ಡಿ.ಕೆ

Published

on

ಸುದ್ದಿದಿನ, ಮಂಡ್ಯ: ಶ್ರೀರಂಗಪಟ್ಟಣ ದಸರಾದಲ್ಲಿ ಜನತೆಗೆ ಅಚ್ಚರಿ ಕಾದಿತ್ತು. ಸಿಎಂ ಕುಮಾರಸ್ವಾಮಿ ಸೇರಿದಂತೆ ಸಚಿವರುಗಳು ಸುಮಾರು ಒಂದುವರೆ ಕಿಲೋ ಮೀಟರ್‌ಗಳ ದೂರ ವಿಂಟೇಜ್ ಕಾರಿನಲ್ಲಿ ರ‌್ಯಾಲಿ ಹೊರಟರು‌.ಶ್ರೀರಂಗಪಟ್ಟಣದ ಕಿರಂಗೂರು ಬನ್ನಿ ಮಂಟಪದಿಂದ ಶ್ರೀರಂಗಪಟ್ಟಣದ ಬಸ್ ನಿಲ್ದಾಣದ ವರೆಗೂ ರ‌್ಯಾಲಿ ಮಾಡಿ ಜನತೆಗೆ ಖುಷಿ ನೀಡಿದರು‌.

ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆ ಸಚಿವರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶೆಂಪುರ್, ಸಾರಾ ಮಹೇಶ್, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಸೇರಿದಂತೆ ಹಲವರು ಸಾಥ್ ನೀಡಿದರು. ದಾರಿಯುದ್ದಕ್ಕೂ ಜನತೆ ಜಯ ಘೋಷಣೆ ಕೂಗಿ ಸಿಎಂ ಗೆ ಶುಭ ಹಾರೈಸಿದರು.‌

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version