ದಿನದ ಸುದ್ದಿ
ಹೊನ್ನಾಳಿ : ನಾಳೆ ‘ಭೀಮಾ ಕೊರೆಗಾಂವ್ ವಿಜಯೋತ್ಸವ’
ಶೋಷಿತ ಸಮುದಾಯ ಇಂದು ಸ್ವಾಭಿಮಾನದಿಂದ. ಆತ್ಮಗೌರವದಿಂದ ಬದುಕಲು ಕಾರಣವಾಗಿರುವುದು ಬುದ್ಧ ಅಂಬೇಡ್ಕರ್ ರವರಂತಹ ಅನೇಕ ವಿಮೋಚನಕಾರರು ತಮ್ಮ ವೈಯುಕ್ತಿಕ ಸುಖವನ್ನು ತ್ಯಾಗಮಾಡಿ ಹೋರಾಡಿದ ಫಲ ಆದರೆ ನಾವುಗಳು ಇಂದು ಕಡುಸ್ವಾರ್ಥಿಗಳಾಗುತ್ತಿದ್ದೇವೆ ನಮ್ಮ ವಿಮೋಚನಕಾರರ ಕನಸನ್ನು ನನಸಾಗಿಸಲು ನಮ್ಮ ದಿನದ ಒಂದು ಘಂಟೆಯನ್ನ ತ್ಯಾಗಮಾಡಿದರೆ ಸಾಕು.
ಮಹಾರಾಷ್ಟ್ರದ ಪೇಶ್ವೆ ಬಾಜಿರಾಯನು ದಲಿತ ಶೋಷಣೆಯಲ್ಲಿ ತೊಡಗಿಕೊಂಡಿದ್ದು ಅವನ ಆಡಳಿತಲ್ಲಿ ದಲಿತರು ಹಿಂದುಳಿದವರು ಹೀನಾಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದರು.ಇದನ್ನು ಕಂಡು ನೊಂದುಹೋಗಿದ್ದ 500 ಮಹರ್ ಸೈನಿಕರು ಪೇಶ್ವೆ ಬಾಜೀರನ 28000(ಇಪ್ಪತ್ತೆಂಟು ಸಾವಿರ) ಸೈನಿಕರನ್ನ ಸೋಲಿಸಿ ದಿನ ಜನವರಿ 01 – 1818 ಇದು ಇಡೀ ಶೋಷಿತ ಸಮುದಾಯದ ಸ್ವಾಭಿಮಾನದ ದಿನ ನಮ್ಮ ವಿಮೋಚನಕಾರರ ಹುಟ್ಟಿಗೆ ಕಾರಣವಾದ ದಿನ ನಮ್ಮ ನೆಮ್ಮದಿಯ ಬದುಕಿಗೆ ಕಾರಣವಾದ ದಿನ
ಈ ಹೆಮ್ಮೆಯ ದಿನವನ್ನು ವಿಜಯೋತ್ಸವವನ್ನಾಗಿ ಪ್ರಜಾಪರಿವರ್ತನಾ ವೇದಿಕೆ ಹೊನ್ನಾಳಿ ತಾಲ್ಲೂಕು ಘಟಕ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜನಸೇವ ಸಮಿತಿ (ರಿ) ಹೊನ್ನಾಳಿ ಸಹಯೋಗದಲ್ಲಿ ಆಚರಿಸುತಿದ್ದು ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ.
ಸ್ಥಳ:- ಅಂಬೇಡ್ಕರ್ ಸಮುದಾಯ ಭವನ ಹೊನ್ನಾಳಿ, ಸಮಯ:- ಬೆಳಗ್ಗೆ. 10 : 30