ಕ್ರೀಡೆ
ಹೊನ್ನಾಳಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
ಸುದ್ದಿದಿನ,ಹೊನ್ನಾಳಿ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾಕೂಟದ ಉದ್ಘಾಟನೆಯನ್ನು ದೇವರಾಜ್ ಸಿ ಪಾಟೀಲ್ ಅವರು ಇಂದು ಮಾಡಿದರು.
ಈ ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕರಾದ ಡಾ.ಹರೀಶ್ .ಪಿ.ಎಸ್. ಉಪನ್ಯಾಸಕರಾದ ಡಾ.ಮಹಾಬಲೇಶ್ವರ,ಡಾ. ಕೊಟ್ರೇಶ್ ಬೆಳ್ಳುಳ್ಳಿ. ಮಂಜುನಾಥ್ ಗುರು. ನಾಗರಾಜ್ ನಾಯ್ಕ .ಪ್ರಶಾಂತ್ ಶರ್ಮ. ವಿಶ್ವನಾಥ ಡಿ ಆರ್. ಶ್ರೀನಿವಾಸ್. ಅಮೂಲ್ಯ. ಪುರುಷೋತ್ತಮ್. ಜಗದೀಶ್. ವಾಗೀಶ್. ಕರಿಬಸಪ್ಪ. ಕಿರಣ್ ಎಂ ಅಂಗಡಿ . ಅಶೋಕ್. ಪ್ರಕಾಶ್.ಸಂಜು. ರೆಹಮತ್. ದೊಡ್ಡಪ್ಪ. ಮುಂತಾದವರು ಭಾಗವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟದ ಉದ್ಘಾಟನೆಯನ್ನು ಯಶಸ್ವಿಗೊಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243