ನಿತ್ಯ ಭವಿಷ್ಯ

ರಾಶಿ ಭವಿಷ್ಯ : ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು | 31-12-2019

Published

on

ಶ್ರೀ ಕೇರಳ ಮಾಂತ್ರಿಕ ಜ್ಯೋತಿಷ್ಯ ಶಾಸ್ತ್ರಂ ಭಗವತಿ ಭದ್ರಾಕಾಳಿ ಅಮ್ಮನವರು ಉಪಾಸಕರು : ಪ್ರಧಾನ ಅರ್ಚಕರು: ಲಕ್ಷ್ಮಿಕಾಂತ್ ಭಟ್ : 9964584883

ಮೇಷ ರಾಶಿ

ಮಕ್ಕಳಿಗಾಗಿ ಇಂದು ನೀವು ಮಾಡುವ ಕೆಲಸಗಳು ನಿಧಾನಗತಿಯಲ್ಲಿ ಯಶಸ್ಸಾಗುವವು, ಇಂದು ನೀವು ಹಮ್ಮಿಕೊಳ್ಳುವ ಶುಭ ಕಾರ್ಯಗಳಿಗೆ ವಿರೋಧಿಗಳು ಅಡ್ಡಗಾಲು ಹಾಕುವ ಸಾಧ್ಯತೆ ಇರುವುದು. ಮುನೇಶ್ವರನಿಗೆ ಮೊಸರಿನ ಬುತ್ತಿಯನ್ನು ನಿವೇದನೆ ಮಾಡಿ. ಹಾಗು ಶ್ರಮವಹಿಸಿ ಮಾಡುವ ಕೆಲಸಗಳಿಗೆ ವಿಘ್ನ ಬರುವ ಸಾಧ್ಯತೆ ಇದೆ. ಗಣಪತಿ ಪ್ರಾರ್ಥನೆ ಮಾಡಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ವೃಷಭ ರಾಶಿ

ಪರೋಪಕಾರಿಗಳಾದ ನೀವು ವಿಶ್ರಾಂತಿಯ ಅಗತ್ಯವಿಲ್ಲದಂತೆ ದುಡಿಯುತ್ತಿರುವಿರಿ. ಆದರೆ ಕೆಲ ಸಮಯವಾದರೂ ವಿಶ್ರಾಂತಿ ಪಡೆದಲ್ಲಿ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು. ದೈಹಿಕ ಆರೋಗ್ಯ ಕೂಡಾ ಅಷ್ಟೆ ಪ್ರಮುಖವಾದುದು. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು. ಶಿವಪಂಚಾಕ್ಷ ರಿ ಮಂತ್ರ ಜಪಿಸಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಮಿಥುನ ರಾಶಿ

ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ಭೂ ವ್ಯವಹಾರದವರಿಗೆ ಉತ್ತಮ ಲಾಭ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ತಾಯಿ ದುರ್ಗಾಮಾತೆಯನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ ಒಳಿತಾಗುವುದು.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಕಟಕ ರಾಶಿ

ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ. ಕಾಣದ ಹಾದಿಗಾಗಿ ಕಾತರಿಸುತ್ತಿರುವಿರಿ. ಆದರೆ ಗುರುಸದೃಶವಾದ ವ್ಯಕ್ತಿಯೊಬ್ಬರಿಂದ ಬದುಕಿನ ಶಾಂತಿಗೆ ಉತ್ತಮ ಸಿದ್ಧಿ ದೊರೆಯುವುದು.
ಶನೇಶ್ಚರ ಮಂತ್ರ ಪಠಿಸಿ. ಬಡವರಿಗೆ ಆಹಾರ ನೀಡಿ. ಕಷ್ಟದಿಂದ ಕಾರ್ಯ ನೆರವೇರುವುದು.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಸಿಂಹ ರಾಶಿ

ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.ಪ್ರಯಾಣಕ್ಕೆ ನಿರಾಳವಾದ ಅವಕಾಶವೊಂದು ಸೃಷ್ಟಿಯಾಗುವುದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಲಾಭ ಉಂಟಾಗುವುದು.ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ನಿಮ್ಮ ಕಾರ್ಯಗಳು ಯಶಸ್ಸಿನತ್ತ ಸಾಗುವವು.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಕನ್ಯಾ ರಾಶಿ

ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡಿ, ಸಿಟ್ಟಿನಿಂದ ಕೂಗಾಡಲು ಮುಂದಾಗದಿರಿ. ಇದರಿಂದ ನಿಮ್ಮ ಪಾಲಿಗೆ ನೀವೇ ದೊಡ್ಡ ತಡೆಗೋಡೆ ಆಗುವಿರಿ. ಈ ಬಗ್ಗೆ ಎಚ್ಚರಿಕೆ ಇರಲಿ. ಜಗತ್ತನ್ನು ತಿದ್ದುವ ಪ್ರಯತ್ನ ಬೇಡ. ನೀವೇ ಬದಲಾಗಿ. ಇದರಿಂದ ಜಗತ್ತು ಸುಂದರವಾಗಿ ಕಾಣುವುದು.‌ ಕಾಳಿಕಾದೇವಿಯನ್ನು ಪ್ರಾರ್ಥಿಸಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ತುಲಾ ರಾಶಿ

ಓದು ಬರಹದಿಂದ ಜ್ಞಾನ ಸಂವರ್ಧನೆಗೆ ದಾರಿ ಇದೆ. ಜ್ಞಾನ ನಿಮ್ಮ ಬದುಕಿನ ಪಾಲಿಗೆ ಕೈದೀಪವಾಗಲಿದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬ ವಚನದಂತೆ ಬುದ್ಧಿಯ ಅಜ್ಞಾನ ಕಳೆದು ಸುಜ್ಞಾನ ಮೂಡುವುದು. ನಿಮ್ಮ ತೀರ್ಮಾನಗಳನ್ನು ಯಾರೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿಮ್ಮ ದೃಢ ನಿರ್ಧಾರವೇ ಕಾರಣ. ಗುರುಹಿರಿಯರ ಆಶೀರ್ವಾದ ಪಡೆಯಿರಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ವೃಶ್ಚಿಕ ರಾಶಿ

ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಚರರಾಶಿಯಲ್ಲಿ ಜನ್ಮಿಸಿರುವ ನೀವು ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದೀರಿ. ಕುಟುಂಬದಲ್ಲಿ ಒಡಕು ಮೂಡುವ ಸಾಧ್ಯತೆ ಇದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೇ ಪ್ರಶ್ನೆಗಳು ಬರುತ್ತವೆ.ಸುಬ್ರಮಣ್ಯಸ್ವಾಮಿಯನ್ನು ಆರಾಧಿಸಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಧನಸ್ಸು ರಾಶಿ

ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ.
ವಿವಾಹಯೋಗ್ಯರಿಗೆ ಸೂಕ್ತಕಾಲವಾದರೂ ದೃಢ ನಿರ್ಧಾರ ತಳೆಯುವಲ್ಲಿ ವಿಳಂಬ ಉಂಟಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ವಿಘ್ನನಾಶಕ ವಿಶ್ವಂಭರನನ್ನು ಪೂಜಿಸಿ. ಅವನು ಮಂಗಳಕಾರ್ಯಕ್ಕೆ ದಾರಿ ತೋರುವನು.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಮಕರ ರಾಶಿ

ಸಾಧು ಪ್ರಾಣಿಗಳನ್ನೇ ಬಲಿಕೊಡುವರೇ ಹೊರತು ಹುಲಿ ಸಿಂಹಗಳನ್ನು ಬಲಿ ಕೊಡುವುದಿಲ್ಲ. ನೀವು ಬಯಸಿದ ಮಾರ್ಗದಲ್ಲಿಯೇ ಸಾಗಬೇಕೆಂಬ ಹಠ ಬಿಟ್ಟುಬಿಡಿ. ಹಠದಿಂದ ಒಳಿತಿಗೆ ತಡೆ ಉಂಟಾಗಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಒಳ್ಳೆಯದು. ಮಾತಾ ದುರ್ಗಾದೇವಿಯನ್ನು ಮನಸಾ ಸ್ಮರಿಸಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಕುಂಭ ರಾಶಿ

ಹೊಯ್ದಾಡುವ ಮನಸ್ಸನ್ನು ದೃಢವಾಗಿ ನಿಯಂತ್ರಿಸಿ. ಸ್ಥೈರ್ಯ ಧೈರ್ಯಗಳಿಂದ ಅನೇಕ ಲಾಭಗಳಿವೆ. ಹೊಸ ರಾಜಕೀಯ ಪಕ್ಷ ಕ್ಕೆ ಸೇರಿಕೊಳ್ಳಬೇಕೆಂಬ ನಿಮ್ಮ ಒಳಗಿನ ಆಸೆಗೆ ಹೊರಗಿನ ಜನರು ತಣ್ಣೀರು ಎರಚುತ್ತಿರುವರು. ಗ್ರಹಗಳು ನೀವು ಪಕ್ಷ ಕ್ಕೆ ಸೇರಬೇಕೆನ್ನುವವು. ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ಸಹಾಯ ಮಾಡುವರು. ಅಂಗವಿಕಲರಿಗೆ ಸಹಾಯ ಮಾಡಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಮೀನ ರಾಶಿ

ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ. ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಮಾಡುವುದು.
ಆಂಜನೇಯ ಸ್ಮರಣೆ ಮಾಡಿ.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.

ಪ್ರಧಾನ ಅರ್ಚಕರು:: ಲಕ್ಷ್ಮಿಕಾಂತ್ ಭಟ್
9964584883

Trending

Exit mobile version