ರಾಜಕೀಯ
ನಾನೆಲ್ಲೂ ತಲೆಮರೆಸಿಕೊಂಡಿಲ್ಲ: ಡಿಕೆಶಿ
ಸುದ್ದಿದಿನ ಡೆಸ್ಕ್: ಜಾರಿ ನಿರ್ದೇಶನಾಲಯ ಬಂಧನ ಭೀತಿ ಎದುರಿಸುತ್ತಿರುವ ಸಚಿವ ಡಿಕೆ ಶಿವಕುಮಾರ್ ಅವರು ರಾಜಧಾನಿ ದೆಹಲಿಗೆ ದೌಡಾಯಿಸಿದ್ದಾರೆ ಎಂದ ಆರೋಪಗಳ ಕುರಿತು ಖುದ್ದ ಪ್ರತಿಕ್ರಿಯಿಸಿರುವ ಸಚಿವರು, ನಾನು ಎಲ್ಲೂ ಓಡಿಹೋಗಿಲ್ಲ. ಹಾಗೂ ಬಂಧನದ ಭೀತಿಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಎಲ್ಲ ವ್ಯವಹಾರಗಳನ್ನು ಕಾನೂನು ಬದ್ಧವಾಗಿಯೇ ಮಾಡುತ್ತಿದ್ದೇನೆ ಹಾಗಾಗಿ ನನಗೆ ಯಾರ ಬಂಧನದ ಭೀತಿಯೂ ಇಲ್ಲ. ಕಳೆದ ಒಂದು ತಿಂಗಳಿನಿಂದ ನಾನು ಬಂಧನ ಭೀತಿಯಲ್ಲಿದ್ದೇನೆ. ದೆಹಲಿಯಲ್ಲಿ ವಕೀಲರನ್ನು ಕಾಣಲು ಬಂದಿದ್ದೇನೆಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಅದು ಶುದ್ಧ ಸುಳ್ಳು. ನಾನು ಯಾವುದೇ ಲೇವಾದೇವಿ ವ್ಯವಹಾರ ಮಾಡಿಲ್ಲ. ಬಿಜೆಪಿಯಲ್ಲಿ ನನಗೂ ಸಾಕಷ್ಟು ಸ್ನೇಹಿತರಿದ್ದಾರೆ. ಪ್ರತಿ ವಿದ್ಯಮಾನಗಳ ಬಗ್ಗೆ ನನಗೆ ಮಾಹಿತಿ ಬರುತ್ತದೆ ಎಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನನ್ನ ಬಗ್ಗೆ ಇಡಿಗೆ ಪತ್ರ ಬರೆದದ್ದನ್ನು ಬಹಿರಂಗಗೊಳಿಸಿದ್ದು ಏಕೆ ಎಂದು ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ಕೇಳಿದ್ದಾಗಿಯೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.