ದಿನದ ಸುದ್ದಿ
ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ವಾಹನ ಪೋಲೀಸರ ವಶ
ಸುದ್ದಿದಿನ,ಮಂಡ್ಯ: ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ಬಳಿ ಬೆಳಗಿನ ಜಾವ 5-45 ರ ಸಮಯದಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದ ವೇಳೆ ಟಾಟಾ ಏಸ್ ವಾಹನದ ಸಂಖ್ಯೆಯ (KA-02 AF 7034)ಚಾಲಕನೊಬ್ಬ ಪೋಲೀಸರನ್ನು ನೋಡಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ನಂತರ ಅನುಮಾನ ಬಂದು ಪರಿಶೀಲಿಸಿದ ಪೋಲೀಸರು ವಾಹನದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯದ ಅಕ್ಕಿಯ ಮೂಟೆಗಳಿದ್ದು ವಾಹನವನ್ನು ಪೋಲೀಸ್ ಠಾಣೆಗೆ ತಂದು ಮಹಜರ್ ಮಾಡಿ ಸುಮಾರು ಒಂದುವರೆ ಕ್ಟೀಂಟಾಲ್ ಗೂ ಅಧಿಕ ಇದೆ ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ. ದಾಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್, ಸಿಬ್ಬಂದಿ ಗಳಾದ ಚಿರಂಜೀವಿ, ಪ್ರೀತಿ ಕುಮಾರ್ ಹಾಜರಿದ್ದರು.