ದಿನದ ಸುದ್ದಿ

ಜಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರ ಅವಿರೋಧ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ : ಜಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕೆಚ್ಚೇನಹಳ್ಳಿಯ ಕೆ.ಬಿ.ಸಿದ್ದೇಶ್ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನಲ್ಲಿ ಬುಧವಾರ ನಡೆದ ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ.ಸಿದ್ದೇಶ್ ಇವರ ಒಂದು ನಾಮಪತ್ರ ಮಾತ್ರ ಸ್ವೀಕಾರವಾದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಸಿ. ಗೋಪಾಲ್ ಘೋಷಿಸಿದರು.

ಈ ವೇಳೆ ನೂತನ ಅಧ್ಯಕ್ಷರು ಮಾತನಾಡಿ, ಬ್ಯಾಂಕಿನ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿ, ಹಾಲಿ ಬಡ್ಡಿ ಮನ್ನಾ ಯೋಜನೆಯಲ್ಲಿ ಉತ್ತಮ ವಸೂಲಾತಿಯಾಗಿದ್ದು, ಸುಸ್ತಿ ಹೊಂದಿರುವ ಸಾಲಗಾರರು ಶೀಘ್ರ ಸಾಲದ ಮೊತ್ತ ಪಾವತಿಸಿ ಹೊಸದಾಗಿ ಶೇ. 3 ರ ಬಡ್ಡಿ ದರದಲ್ಲಿ ಸಾಲ ಪಡೆಯಲು ಹಾಗೂ ಚಾಲ್ತಿ ಕಂತಿನ ಸಾಲಗಾರರ ನಿಗದಿತ ಅವಧಿಯೊಳಗೆ ಕಂತಿನ ಮೊತ್ತ ಪಾವತಿಸಿ ಸರ್ಕಾರದ ಬಡ್ಡಿ ರಿಯಾಯಿತಿ ಪಡೆಯಲು ಮನವಿ ಮಾಡಿದರು.

ಹಾಗೂ ಬ್ಯಾಂಕಿನ ಮುಂಭಾಗದಲ್ಲಿ ನೂತನ ಮಳಿಗೆ ನಿರ್ಮಿಸಲು ಹಾಗೂ ಶಾಸಕರ ಹಾಗೂ ಸಂಸದರ ಅನುದಾನದಲ್ಲಿ ಕಟ್ಟಡ ಹಾಗೂ ಶೌಚಾಲಯ ನಿರ್ಮಿಸಲು ಪ್ರಯತ್ನಿಸುವುದಾಗಿ ತಿಳಿಸುತ್ತಾ ಎಲ್ಲಾ ನಿರ್ದೇಶಕರಿಗೂ ಬ್ಯಾಂಕಿನ ಸದಸ್ಯರಿಗೂ ಕೃತಜ್ಞತೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಜಗಳೂರು ಪಿಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷರಾದ ಚೌಡಮ್ಮ, ನಿರ್ದೇಶಕರುಗಳಾದ ಜೆ ಎಸ್ ಮಲ್ಲಿಕಾರ್ಜುನ, ಬಿ ಡಿ ಹನುಮಂತರೆಡ್ಡಿ, ಪಿ ಎಸ್ ಮಂಜಣ್ಣ, ಎಂ ಟಿ ಧನಂಜಯರೆಡ್ಡಿ, ಎಂ ವಿ ರಾಜ್, ಹಾಗೂ ಟಿ ಎಂ ಪುಷ್ಪ, ಶ್ರೀ ಚನ್ನಬಸಪ್ಪ, ಸಿದ್ದೇಶ್, ಸೈಯದ್ ಕಲಿಂರವರು, ಕೆ ಜಿ ಲೋಲಾಕ್ಷಿಯವರು, ಕೆ ಹೆಚ್ ಮಂಜಪ್ಪ ಹಾಗೂ ವ್ಯವಸ್ಥಾಪಕರಾದ ಟಿ.ಎನ್. ಭೂಷಣ್ ಹಾಜರಿದ್ದರು.

ಸುದ್ದಿದಿನ‌.ಕಾಂ|ವಾಟ್ಸಾಪ್|9980346243

Trending

Exit mobile version