ದಿನದ ಸುದ್ದಿ
ಜಲ ಜೀವನ್ ಮಿಷನ್ | 5 ಸಾವಿರದ 9 ಕೋಟಿ ರೂಪಾಯಿ ಅನುದಾನ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಸುದ್ದಿದಿನ ಡೆಸ್ಕ್ : ಜಲ ಜೀವನ್ ಮಿಷನ್’ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೇಶದ ಪ್ರತಿ ಗ್ರಾಮದ ಮನೆ ಮನೆಗ ಶುದ್ಧ ಕುಡಿಯುವ ನೀರನ್ನು ನಳದ ಮೂಲಕ ತಲುಪಿಸುವ ಯೋಜನೆ, ’ಪ್ರತಿ ಮನೆಗೆ ನೀರು’ ಧ್ಯೇಯದೊಂದಿಗೆ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇಕಡ 50 ರ ಅನುದಾನದೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ 15ಲಕ್ಷ ಕುಟುಂಬಗಳಿಗೆ 2023 ರ ಒಳಗೆ ನೀರು ಸಂಪರ್ಕ ಜೋಡಿಸುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಕೇಂದ್ರ ಸರ್ಕಾರ ರಾಜ್ಯದ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು, 5 ಸಾವಿರದ 9 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಹೇಳಿದ್ದಾರೆ.
’ಜಲ ಜೀವನ್ ಮಿಷನ್’ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೇಶದ ಪ್ರತಿ ಗ್ರಾಮದ ಮನೆ ಮನೆಗ ಶುದ್ಧ ಕುಡಿಯುವ ನೀರನ್ನು ನಳದ ಮೂಲಕ ತಲುಪಿಸುವ ಯೋಜನೆ, ’ಪ್ರತಿ ಮನೆಗೆ ನೀರು’ #HarGharJal ಧ್ಯೇಯದೊಂದಿಗೆ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇ. 50ರ ಅನುದಾನದೊಂದಿಗೆ ಜಾರಿಗೊಳಿಸಲಾಗುತ್ತಲಿದೆ. pic.twitter.com/GjBnLXKqAf
— Pralhad Joshi (@JoshiPralhad) April 9, 2022
ರಾಜ್ಯದಲ್ಲಿ 15 ಲಕ್ಷ ಕುಟುಂಬಗಳಿಗೆ 2023ರ ಒಳಗೆ ನೀರು ಸಂಪರ್ಕ ಜೋಡಿಸುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಕೇಂದ್ರ ಸರ್ಕಾರ ರಾಜ್ಯದ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು, 5009 cr ಅನುದಾನ ನೀಡಿದೆ.#JalJeevanMission #HarGharJal #SamajikNyayPakhwada
— Pralhad Joshi (@JoshiPralhad) April 9, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243