ದಿನದ ಸುದ್ದಿ
ಜರಿನಾ ಬಿ.ಎನ್.ನವಿಲೇಹಾಳ್ ಅವರಿಗೆ ‘ನಾಡಪ್ರಭು ಕೆಂಪೇಗೌಡ ರಾಜ್ಯಪ್ರಶಸ್ತಿ’
ಸುದ್ದಿದಿನ ಡೆಸ್ಕ್ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಚನ್ನಗಿರಿ ಘಟಕದ ಅಧ್ಯಕ್ಷರಾದ ಶ್ರೀಮತಿ ಜರಿನಾ ಬಿ.ಎನ್,ನವಿಲೇಹಾಳ್ ಅವರಿಗೆ ನಾಡಪ್ರಭು ಕೆಂಪೇಗೌಡ ರಾಜ್ಯಪ್ರಶಸ್ತಿ’ ಲಭಿಸಿದೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಪ್ರಶಸ್ತಿ ಲಭಿಸಿದ್ದು, ಯಲಹಂಕ ಘಟಕದ ಉದ್ಘಾಟನಾ ಸಮಾರಂಭ ಮೇ 29 ರಂದು ಭಾನುವಾರ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243