ರಾಜಕೀಯ
ಮೈಸೂರು ನಗರ ಪಾಲಿಕೆ ಚುನಾವಣೆ | ಜೆಡಿಎಸ್ ಶಾಸಕರು ರೆಸಾರ್ಟ್ ನತ್ತ..!
ಸುದ್ದಿದಿನ,ಮೈಸೂರು : ನಾಳೆ ಮೇಯರ್, ಉಪ ಮೇಯರ್ ಚುನಾವಣೆ ನಡೆಯೋ ಹಿನ್ನೆಲೆ ಜೆಡಿಎಸ್ ಸದಸ್ಯರು ಮೈಸೂರಿನಿಂದ ಬಿಡದಿ ಬಳಿ ಇರೋ ಈಗಲ್ ಟನ್ ರೆಸಾರ್ಟ್ ನತ್ತ ಪಯಣ ಬೆಳೆಸಿದ್ದಾರೆ.
ಜೆಡಿಎಸ್ ನಗರಾಧ್ಯಕ್ಷ ಕೆ.ಟಿ ಚೆಲುವೇಗೌಡ ಮುಂದಾಳತ್ವದಲ್ಲಿ ಜೆಡಿಎಸ್ನ 18 ನಗರ ಪಾಲಿಕೆ ಸದಸ್ಯರು ರೆಸಾರ್ಟ್ ನತ್ತ ಪಯಣ ಬೆಳೆಸಿದ್ದು,
ಪಾಲಿಕೆ ಗದ್ದುಗೆ ಹಿಡಿಯಲು ಜೆಡಿಎಸ್ ನಲ್ಲಿ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.