ದಿನದ ಸುದ್ದಿ
ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ : ಪದ್ಮಶ್ರೀ ಜೋಗತಿ ಮಂಜಮ್ಮ
ಸುದ್ದಿದಿನಡೆಸ್ಕ್: ಮಸ್ಕಿ ತಾಲೂಕು ಗ್ರಾಮದ ಶ್ರೀಮತಿ ಹೊನ್ನೂರಮ್ಮ ಡಿ.ಎಂ. ಸಿದ್ದಪ್ಪ ಸ್ಮಾರಕ ಸರಕಾರಿ ಪ್ರಥಮ ಕಾಲೇಜ್ ಆವರಣದಲ್ಲಿ ಯುವ ಕವಿ ಲಕ್ಷ್ಮಣ್ ನಿಟ್ರುವಟ್ಟಿ ತೆಕ್ಕಲಕೋಟೆ ರಚಿಸಿರುವ ಬಾಲಶತಕ ಮುಕ್ತ ಕಗಳು ಎಂಬ ಗ್ರಂಥ ಕರ್ನಾಟಕ ನಿಕಟ ಪೂರ್ವ ಜನಪದ ಅಕಾಡೆಮಿ ಪದ್ಮಶ್ರೀ ಪುರಸ್ಕೃತರಾದ ಡಾ.ಮಂಜಮ್ಮ ಜೋಗತಿ ಜ್ಯೋತಿ ಬೆಳಗುವ ಮುಖಾಂತರಉದ್ಘಾಟಿಸಿದರು.
ನಂತರ ಮಾತನಾಡಿದ ಮಕ್ಕಳಿಗೆ ಸರಕಾರಿ ಕನ್ನಡ ಶಾಲೆಯಲ್ಲಿ ಓದಿಸಬೇಕು ನಮ್ಮ ಕನ್ನಡಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಮತ್ತು ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕು ಆಗ ಮಾತ್ರ ನಮ್ಮ ನಾಡು ನುಡಿ ಉಳಿಯಲು ಸಾಧ್ಯ ಮಂಗಳಮುಖಿಯರನ್ನು ವಿದ್ಯಾಭ್ಯಾಸದ ಕಡೆಗೆ ಕರೆತನ್ನಿ ಅವರಿಗೆ ವಿದ್ಯಾಭ್ಯಾಸ ನೀಡಿ ಈಗಾಗಲೇ ಎಷ್ಟೋ ಜನ ಮಂಗಳಮುಖಿಯರು ಸರಕಾರಿ ನೌಕರಿಯಲ್ಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಿನ್ಸಿಪಾಲರಾದ ಮಲ್ಲಿಕಾರ್ಜುನ ಮುಕ. ನಾಗರಾಜ್ ಚಿಕ್ಕಮಂಗಳೂರು. ಡಾಕ್ಟರ್ ವೇಣುಗೋಪಾಲ್. ದೀಕ್ಷಿತ್ ಗುಡಿಬಂಡಿ ಚಿಕ್ಕಮಂಗಳೂರು. ಸಿದ್ದರಾಮಯ್ಯ ಸ್ವಾಮಿಗಳು ತೆಕ್ಕಲಕೋಟೆ. ಸಂಪಾದಕರಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ತಾಲೂಕು ಅಧ್ಯಕ್ಷರು .ಸಾಹಿತಿಗಳು. ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243