ದಿನದ ಸುದ್ದಿ
ಗೌರಿ ಲಂಕೇಶ ಹತ್ಯೆ ಪ್ರಕರಣ: ಮತ್ತೆ ಬೆಳಗಾವಿಗೆ ಎಸ್ ಐ ಟಿ ತಂಡ
- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣ
- ಮತ್ತೆ ಬೆಳಗಾವಿಗೆ ಎಸ್ ಐ ಟಿ ತಂಡ
ಸುದ್ದಿದಿನ ಡೆಸ್ಕ್: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಚುರುಕಿನ ತನಿಖೆ ನಡೆಸುತ್ತಿರುವ ಎಸ್ ಐ ಟಿ ತಂಡ ಮತ್ತೆ ಬೆಳಗಾವಿ ಭೇಟಿ ಪರಿಶೀಲನೆ ನಡೆಸುತ್ತಿದೆ.
ಬೆಳಗಾವಿ ನಗರ ಹಾಗೂ ಖಾನಾಪುರ ಅರಣ್ಯ ಪ್ರದೇಶ ಸೇರಿದಂತೆ ಹಲವಡೆ ಭೇಟಿ ನೀಡಿದ ಎಸ್ ಐ ಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ವೇಳೆ ಎಸ್ ಐ ಟಿ ಅಧಿಕಾರಿಗಳು ಮತ್ತೆ ಮೂವರ ವಿಚಾರಣೆ ನಡೆಸಿದ್ದು, ಮಾಹಿತಿ ಕಲೆಹಾಕಿದ್ದಾರೆ.
ಬೆಳಗಾವಿಯ ಇನ್ನೂ ಅನೇಕ ಜನರ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಜತೆಗೆ ಎಸ್ ಐಟಿ ತಂಡ ಹಲವು ಸ್ಥಳಗಳ ಪಂಚನಾಮೆ ನಡೆಸಿದೆ ಎಂದು ವರದಿಯಾಗಿದೆ.