ದಿನದ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ‘ಪ್ರಭಾರ ಭತ್ಯೆ’ ಶೇ.7.5ರಿಂದ ಶೇ.15ಕ್ಕೆ ಹೆಚ್ಚಳ

Published

on

ಸುದ್ದಿದಿನ,ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಒಂದು ಹುದ್ದೆಯ ಕರ್ತವ್ಯದ ಜೊತೆಗೆ, ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರಿ ಹುದ್ದೆಯ ಜವಾಬ್ದಾರಿಯನ್ನು ನೀಡಲಾಗುತ್ತಿತ್ತು. ಇಂತಹ ಪ್ರಭಾರಿ ಹುದ್ದೆ ನಿರ್ವಹಿಸುತ್ತಿದ್ದ ನೌಕರರ ಪ್ರಭಾರಿ ಹುದ್ದೆಯ ಭತ್ಯೆಯಾಗಿ ಈ ಮೊದಲು ಶೇ.7.5ರ ದರದಲ್ಲಿ ನೀಡಲಾಗುತ್ತಿತ್ತು. ಆದ್ರೇ ಈ ದರವನ್ನು ಇದೀಗ ಶೇ.15ರ ದರಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹೆಚ್ಚಿ ಪ್ರಭಾರ ಹುದ್ದೆ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ಮತ್ತು 68ರ ಅಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವದ ಜೊತೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ಮೊದಲ ಮೂರು ತಿಂಗಳವರೆಗೆ ಶೇ.7.5 ದರದಲ್ಲಿ, ಆ ನಂತ್ರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇ.15ರ ದರದಲ್ಲಿ ಪ್ರಭಾರ ಭತ್ಯೆಯ ದರವನ್ನು ನಿಗಧಿ ಪಡಿಸಿ ಆದೇಶ ಹೊರಡಿಸಿದೆ.

ಅಂದಹಾಗೇ, ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ನಿಗಧಿ ಪಡಿಸಿರುವ ಪ್ರಭಾರ ಭತ್ಯೆಯ ದರಗಳನ್ನು ಶೇ.15ರ ದರದಲ್ಲಿ ಹೆಚ್ಚುಮಾಡಿ ಆದೇಶಿಸಿದೆ. ಹೀಗಾಗಿ ಪ್ರಭಾರದಲ್ಲಿರಿಸಿದ ಸರ್ಕಾರಿ ನೌಕರರು ಮೊದಲ ಮೂರು ತಿಂಗಳವರೆಗಿನ ಅವಧಿಗೆ ಶೇ.7.5ರ ದರದಲ್ಲಿ ಮೂರು ತಿಂಗಳ ಅವಧಿಯಯು ಮುಕ್ತಾಯ ಗೊಂಡ ತರುವಾಯದ ದಿನಾಂಕದಿಂದ ಶೇ.15ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ನೀಡಲಿದೆ.

ಸರ್ಕಾರ ಆದೇಶಿಸಿ ಜಾರಿಗೊಳಿಸಿರು ಪ್ರಭಾರ ಭತ್ಯೆಯ ದರಗಳು ಸರ್ಕಾರಿ ನೌಕರರಿಗೆ 30-04-2019ರ ದಿಂದಲೇ ಜಾರಿಗೆ ಬರಲಿದೆ. ಆದ್ರೇ 30-04-2019ಕ್ಕಿಂತ ಹಿಂದಿನ ಪ್ರಭಾರದ ಅವಧಿಗೆ ಸಂಬಂಧಿಸಿದಂತೆ ಎಷ್ಟೇ ಅವಧಿಯು ಒಳಗೊಂಡಿದ್ದರೂ, ಹಿಂದಿನ ದರದಲ್ಲಿಯೇ ಅಂದ್ರೇ ಶೆ.7.5ರ ದರದಲ್ಲಿಯೇ ಪ್ರಭಾರ ಭತ್ಯೆಯನ್ನು ನೀಡಲು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version