ದಿನದ ಸುದ್ದಿ
‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ ನೋಡಿ
ಸುದ್ದಿದಿನ,ದಾವಣಗೆರೆ : 2019-20 ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಆನೂರು ಅನಂತಕೃಷ್ಣ ಶರ್ಮ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು 2020 ರ ಫೆಬ್ರವರಿ 27 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗುವುದು. ಗೌರವ ಪ್ರಶಸ್ತಿ ಪುರಸ್ಕøತರಿಗೆ ರೂ.50,000 ಗಳ ಗೌರವ ಧನ ಮತ್ತು ವಾರ್ಷಿಕ ಪ್ರಶಸ್ತಿ ಪುರಸ್ಕøತರಿಗೆ ರೂ.25,000 ಗಳ ಗೌರವಧನ ನೀಡಲಾಗುವುದು.
ಮತ್ತೂರು ಗೋಪಾಲ್(ಅಂಧರು) ಶಿವಮೊಗ್ಗ-ಹಾಡುಗಾರಿಕೆ, ಬಿ.ನಾಗರಾಜ ಮೈಸೂರು-ಕಥಕ್ ಇವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಆರ್.ಎಸ್.ನಂದಕುಮಾರ್ ಮೈಸೂರು-ಹಾಡುಗಾರಿಕೆ, ಎಂ.ಟಿ.ರಾಜಕೇಸರಿ, ಬೆಂಗಳೂರು-ಮೃದಂಗ, ಎಂ.ಎನ್.ಗಣೇಶ್ ಮೇಲುಕೋಟೆ-ನಾದಸ್ವರ ಇವರು ಕರ್ನಾಟಕ ಸಂಗೀತ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಫಕೀರೇಶ ಕಣವಿ ಗುಲ್ಬರ್ಗಾ-ಗಾಯನ, ಎಸ್.ಬಾಲೇಶ್ ಬೆಳಗಾವಿ-ಶಹನಾಯಿ, ಎಂ.ನಾಗೇಶ್ ಬೆಂಗಳೂರು-ತಬಲಾ, ಶಶಿಕಲಾ ದಾನಿ ಹುಬ್ಬಳ್ಳಿ -ಜಲತರಂಗ ಇವರು ಹಿಂದೂಸ್ತಾನಿ ಸಂಗೀತ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಕಮಲಾ ಭಟ್ ಮಂಗಳೂರು-ಭರತನಾಟ್ಯ, ಎ.ಅಶೋಕ ಕುಮಾರ, ಬೆಂಗಳೂರು-ಭರತನಾಟ್ಯ, ಶುಭಾಂಗಿ ಗುಲ್ಬರ್ಗಾ-ಭರತನಾಟ್ಯ ಇವರು ನೃತ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಕೆ.ಎಸ್. ಸುರೇಖಾ ದ.ಕನ್ನಡ, ಡಾ.ಜ್ಯೋತಿಲಕ್ಷ್ಮಿ ಡಿ.ಪಿ. ಧಾರವಾಡ ಇವರು ಸುಗಮ ಸಂಗೀತ ಪ್ರಶಸ್ತಿಗೆ ಹಾಗೂ ಬಸವಣ್ಣಯ್ಯ ಶಾಸ್ತ್ರಿ ಬಸವನಕಟ್ಟಿ ಗದಗ, ನರಸಿಂಹದಾಸ್, ತುಮಕೂರು ಇವರು ಕಥಾಕೀರ್ತನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ರಾಮ ಸುಬ್ರಾಯ ಶೇಟ್, ಚಿಕ್ಕಮಗಳೂರು ಇವರು ಗಮನ ಪ್ರಶಸ್ತಿಗೆ ಹಾಗೂ ಓಂಕಾರನಾಥ್ ಗುಲ್ವಾಡಿ ಬಾಂಬೆ – ಹಿಂದೂಸ್ತಾನಿ ಸಂಗೀತ – ತಬಲಾ ಇವರು ಹೊರನಾಡ ಕಲಾವಿದರ ಪ್ರಶಸ್ತಿಗೆ ಆಯ್ಕೆಯಾಗಿದ್ದು ಇವರಿಗೆ 2020 ರ ಫೆ.27 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243