ರಾಜಕೀಯ

ಮೊದಲ ಬಾರಿಗೆ ಕೋಟೆ ನಗರಿಯಲ್ಲಿ ಅರಳಿದ ಕಮಲ

Published

on

ಸುದ್ದಿದಿನ, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ ಗೆಲುವಿನ ಕೇಕೆ ಹಾಕಿದೆ.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಚಾಣಾಕ್ಷ ನಡೆಯ ಮೂಲಕ ಚಿತ್ರದುರ್ಗ ನಗರಸಭೆ ವಶಪಡಿಸಿಕೊಳ್ಳುವಲ್ಲಿ ಪಾರುಪತ್ಯ ಸಾಧಿಸಿದ್ದಾರೆ. ನಗರಸಭೆ ಆರಂಭದಿಂದ ಈವರೆಗೆ ಖಾತೆ ತೆರೆಯದ ಬಿಜೆಪಿ ಪಕ್ಷ ಈಗ ಭರ್ಜರಿ ಎಂಟ್ರಿ ಕೊಟ್ಟಿದೆ.

ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ 17, ಜೆಡಿಎಸ್ 6, ಕಾಂಗ್ರೆಸ್ 5, ಪಕ್ಷೇತರ 7 ಸ್ಥಾನ ಗಳಿಸಿವೆ.

ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಪೈಕಿ ಎರಡರಲ್ಲಿ ಬಿಜೆಪಿ ಗದ್ದುಗೆ ಏರಿದೆ. ಚಿತ್ರದುರ್ಗ ನಗರಸಭೆ, ಹೊಸದುರ್ಗ ಪುರಸಭೆ ಬಿಜೆಪಿಯ ತೆಕ್ಕೆಗೆ ಸೇರಿವೆ.
ಚಳ್ಳಕೆರೆ ನಗರಸಭೆ ಕಾಂಗ್ರೆಸ್ ಸರಳ ಬಹುಮತ ಸಿಕ್ಲಿದ್ದು, ಕಾಂಗ್ರೆಸ್ ಶಾಸಕ ರಘುಮೂರ್ತಿ ಸಾರಥ್ಯ ವಹಿಸಿದ್ದರು.

ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಪ್ರತಿಷ್ಠೆ ಪಣ

ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಪ್ರತಿಷ್ಠೆ ಪಣಕ್ಕಿಟ್ಟಿ ಚುನಾವಣೆಗೆ ಧುಮುಕಿದ್ದರು. ಹೊಸದುರ್ಗ ಪುರಸಭೆಯಲ್ಲಿ ಗೆದ್ದ ಗೂಳಿಹಟ್ಟಿ ಶೇಖರ್ ಮತ್ತೆ ಮಾಜಿ ಶಾಸಕ ಗೋವಿಂದಪ್ಪ ಮುಖಭಂಗ ಅನುಭವಿಸಿದ್ದಾರೆ.

ಸೋತು ಸುಣ್ಣವಾದ ಕಾಂಗ್ರೆಸ್

ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕಾಂಗ್ರೆಸ್ ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೂಡ ಮುಗ್ಗರಿಸಿದೆ. ಹಾಲಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಆಜಂನೇವರಿಗೆ ತೀವ್ರ ಮುಖಭಂಗವಾಗಿದೆ.

 

Leave a Reply

Your email address will not be published. Required fields are marked *

Trending

Exit mobile version