ರಾಜಕೀಯ
ಚಿತ್ರದುರ್ಗದಲ್ಲಿ ದಂಪತಿಗಳ ಗೆಲುವಿನ ನಗೆ !
ಸುದ್ದಿದಿನ ಡೆಸ್ಕ್: ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಇಬ್ಬರು ದಂಪತಿಗಳು ಗೆಲುವಿನ ಬೀರಿದ್ದಾರೆ. 16ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದಿದ್ದ ಬಿ.ವೆಂಕಟೇಶ್ವಪ್ಪ ಗೆಲವು ಸಾಧಿಸಿದ್ದು, ಅವರ ಪತ್ನಿ ತಿಪ್ಪಮ್ಮ 19ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಜಯಗಳಿಸಿದ್ದಾರೆ.
11ನೇ ವಾರ್ಡ್ನಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಜಿ.ಎಸ್.ಜಯಂತಿ ಗೊಪ್ಪೆ ಜಯ ಸಾಧಿಸಿದ್ದು, ಅವರ ಪತಿ ಎಚ್.ಎನ್.ಮಂಜುನಾಥ ಗೊಪ್ಪೆ ಪಕ್ಷೇತರ ಅಭ್ಯರ್ಥಿಯಾಗಿ 14ನೇ ವಾರ್ಡ್ ಜಯಗಳಿಸಿದ್ದಾರೆ.
ಸೋಲಿಲ್ಲದ ಸರದಾರ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸತತವಾಗಿ ಗೆಲವುದು ಕಷ್ಟಸಾಧ್ಯ. ಆದರೆ ಚಿತ್ರದುರ್ಗ ನಗರಸಭೆಯಲ್ಲಿ ಅಭ್ಯರ್ಥಿಯೊಬ್ಬ ಸತತ ಐದನೇ ಬಾರಿ ಗೆಲವು ಸಾಧಿಸಿದ್ದಾರೆ. 23ನೇ ವಾರ್ಡ್ನ ಅಭ್ಯರ್ಥಿ ಮಹಮದ್ ಅಹಮದ್ ಪಾಷಾ (ಸರ್ದಾರ್) ಕಾಂಗ್ರೆಸ್ನಿಂದ ಐದನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ನಗೆ: 21ನೇ ವಾರ್ಡ್ ಅಭ್ಯರ್ಥಿ ಎನ್.ಒ. ಅನುರಾಧ ಅವರು ಮೂರನೇ ಬಾರಿ ನಗರಸಭೆ ಪ್ರವೇಶಿಸಿ ಹ್ಯಾಟ್ರಿಕ್ ಸಾಧಿಸಿದ್ದಾರೆ.