ರಾಜಕೀಯ
ಸುದ್ದಿ ಸ್ಪೋಟ | ಕೊನೆ ಗಳಿಗೆಯಲ್ಲಿ ಕೈ ಕೊಟ್ಟ ‘ಆಪರೇಶನ್ ಕಮಲ’ : ಜಾರಕಿಹೊಳಿ ವಿರುದ್ಧ ತಿರುಗಿಬಿದ್ದ ಶಾಸಕರು..!
ಸುದ್ದಿದಿನ ಡೆಸ್ಕ್ : ರಾಜ್ಯ ರಾಜಕಾರಣವನ್ನ ತಲ್ಲಣಗೊಳಿಸೋ ಅತಿದೊಡ್ಡ ಸುದ್ದಿ. ಕುಮಾರಸ್ವಾಮಿ ಸರ್ಕಾರದ ಅಳಿವು-ಉಳಿವಿನ ಸುದ್ದಿ. ಕಳೆದ ಭಾನುವಾರ ಭೇಟಿಯಾಗಿದ್ದ ಶ್ರೀರಾಮುಲು-ಜಾರಕಿಹೊಳಿ- ಸರ್ಕಾರ ಬೀಳಿಸೋ ವಿಚಾರದ ಬಗ್ಗೆ ಇಬ್ಬರ ನಡುವೆ ಮಾತುಕತೆ- ಅವರಿಬ್ಬರೂ ಮಾಡಿದ ಪ್ಲಾನ್ ಏನು..? ಹೆಚ್ಡಿಕೆ ಸರ್ಕಾರಕ್ಕೆ ಏನಾಗಲಿದೆ..? ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..
ಕೊನೆ ಗಳಿಗೆಯಲ್ಲಿ ಕೈಕೊಟ್ಟ ಆಪರೇಷನ್ ಕಮಲ
ಸದ್ಯಕ್ಕೆ ಕುಮಾರಸ್ವಾಮಿ ಸರ್ಕಾರ ಸೇಫ್.. ಸೇಫ್.. ಸೇಫ್.. ಬಂಡಾಯ ಎದ್ದಿದ್ದ ಕಾಂಗ್ರೆಸ್ ಶಾಸಕರೆಲ್ಲಾ ಕೂಲ್..ಕೂಲ್..ಕೂಲ್… ಆಗಿದ್ದಾರೆ.ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ ದಿನ ರಾಮುಲು ಜತೆ ಜಾರಕಿಹೊಳಿ ಮಾತುಕತೆ ಯಾವುದೇ ಕಾರಣಕ್ಕೂ ನಾವು ಬಿಜೆಪಿಗೆ ಬರಲ್ಲ ಎಂದ ರಮೇಶ್ ಜಾರಕಿಹೊಳಿ.. ಸರ್ಕಾರ ಬೀಳಿಸೋ ನಂಬರ್ ನನ್ನ ಬಳಿ ಇಲ್ಲ, ಐದಾರು ಶಾಸಕರು ಸರ್ಕಾರ ಕೆಡವಲು ಆಗಲ್ಲ- ನಮಗೆ ಇನ್ನೊಂದು ಮಂತ್ರಿ ಸ್ಥಾನ ಕೊಡ್ತಾರೆ, ಆಪರೇಷನ್ ಕಮಲ ಇಲ್ಲಿಗೇ ನಿಲ್ಲಿಸೋಣ ಜಾರಕಿಹೊಳಿ ಹೇಳಿಕೆಯಿಂದ ಫುಲ್ ಶಾಕ್ ಆದ ಶ್ರೀರಾಮುಲು & ಜನಾರ್ದನ ರೆಡ್ಡಿ
ನಿಮ್ಮನ್ನ ಡಿಸಿಎಂ ಮಾಡುತ್ತೇವೆ.. ದಯವಿಟ್ಟು ಕೈ ಬಿಡಬೇಡಿ ಎಂದರು ಶ್ರೀರಾಮುಲು. ಈ ಹಿನ್ನಲೆಯಲ್ಲಿ ನಾಳೆಯಿಂದಲೇ ಬಳ್ಳಾರಿ ಉಪ ಚುನಾವಣಾ ಸಮರದ ಪ್ರಚಾರದಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗಲಿದ್ದಾರೆ.
ಆಪರೇಷನ್ ಕಮಲ ಠುಸ್ ಆಗ್ತಿದ್ದಂತೆ ಕಾಂಗ್ರೆಸ್ ಅತೃಪ್ತರಿಂದ ಪಕ್ಷಕ್ಕೆ ಮತ್ತೆ ನಿಷ್ಠೆ ರಮೇಶ್ ಜಾರಕಿಹೊಳಿಯನ್ನ ಹಿಗ್ಗಾ-ಮುಗ್ಗಾ ಜಾಡಿಸಿದ ಕಾಂಗ್ರೆಸ್ ಶಾಸಕರು, ನಮ್ಮನ್ನ ಚೆನ್ನೈಗೆ ಬರೋಕೆ ಹೇಳಿ ಮರ್ಯಾದೆ ಕಳೆದ್ರಿ ಎಂದ ಎಂಟಿಬಿ ಹಾಗೂ ಪಕ್ಷದ ಸಿಪಾಯಿ ಆಗಿದ್ದ ನನ್ನನ್ನ ಯಾಮಾರಿಸಿದ್ರಿ ಎಂದ್ರು ಸುಧಾಕರ್. ನಾನು ಇನ್ಮುಂದೆ ಜಾರಕಿಹೊಳಿಯನ್ನ ನಂಬಲ್ಲ ಎಂದ ಬಿ.ಸಿ.ಪಾಟೀಲ್. ನಿಮ್ಮ ಸಹವಾಸ ಬೇಡವೇ ಬೇಡ ಎಂದ ಶಾಸಕ ಶಿವರಾಮ್ ಹೆಬ್ಬಾರ್ . ಸರಿಯಾಗಿ ಪ್ಲಾನ್ ಮಾಡದೇ ನಮ್ಮ ಮರ್ಯಾದೆ ಕಳೆದ್ರಿ ಎಂದ ಅತೃಪ್ತ ಶಾಸಕರು ನೀವ್ ಏನ್ ಬೇಕಾದ್ರೂ ಮಾಡಿಕೊಳ್ಳಿ ನಾವು ದುಡ್ಡು ವಾಪಸ್ ಕೊಡಲ್ಲ ಎಂದ ಶಾಸಕರು ಜಾರಕಿಹೊಳಿ ವಿರುದ್ಧ ಅತೃಪ್ತರ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401