ದಿನದ ಸುದ್ದಿ
ನವಿಲೇಹಾಳಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ; ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ
ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ,ಗ್ರಾಮ ಘಟಕ ನವಿಲೇಹಾಳಿನಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಕನ್ನಡ ದ್ವಜಾರೋಹಣವನ್ನು ಮಂಗಳೂರು ಘಟಕದ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಯುತ ಪ್ರದೀಪ್ ರವರು ನಾಡಗೀತೆ ಯೊಂದಿಗೆ ನೆರವೇರಿಸಿದರು.
ಬೃಹತ್ ಗಾತ್ರದ ನಾಡ ಬಾವುಟದ ಮೆರವಣಿಗೆಗೆ ನವಿಲೇಹಾಳು ಪದ್ಮಶ್ರೀ ಪ್ರೌಢ ಶಾಲೆಗೆ ಭೂ ಧಾನ ಮಾಡಿದ ಶ್ರೀಯುತ ಎನ್.ವಿ. ಮಂಜುನಾಥರವರು ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಗ್ರಾಮದ
ಕ.ರ.ವೇ ಗೌರವಾಧ್ಯಕ್ಷರಾದ ಶ್ರೀ ಜಿ.ಮಹೇಶ್ವರಪ್ಪ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದಯ ಟಿವಿ ಹರಟೆ ಖ್ಯಾತಿಯ ಹಾಸ್ಯ ಭಾಷಣ
ಕಾರರಾದ ಕಲಬುರುಗಿಯ ಶ್ರೀಮತಿ ಇಂದುಮತಿ ಸಾಲಿಮಠ್ ರವರು ನೆರವೇರಿಸಿ, ತಮ್ಮ ಹಾಸ್ಯ ಭಾಷಣದಿಂದ ಮತ್ತು ಹಾಸ್ಯ ಹಾಡುಗಳಿಂದ ನೆರೆದಿದ್ದ ಗ್ರಾಮಸ್ಥರ ಜನಸ್ತೋಮವನ್ನು ನಗೆ ಕಡಲಿನಲ್ಲಿ ತೇಲಿಸಿದರು. ವರ ನಟ ಡಾ. ರಾಜಕುಮಾರ್ ರವರ ಸುಪುತ್ರ ಕರ್ನಾಟಕ ರತ್ನ,ಚಂದನ ವನದ ಧ್ರುವತಾರೆ ಪುನೀತ್ ರಾಜಕುಮಾರ್ ರವರ ಸಾಮಾಜಿಕ ಸೇವೆಯನ್ನು ತಾವೆಲ್ಲರೂ ಅನುಸರಿಸಬೇಕು, ಅಪ್ಪುತಮ್ಮ ಕಣ್ಣಿನ ಧಾನದಿಂದ ಇಂದು ನಾಲ್ಕು ಜನರ ಜೀವನಕ್ಕೆ ಬೆಳಕಾಗಿದೆ ಎಂದರು.
ಇಂದು ನೀವೆಲ್ಲರೂ ಈ ಕಾರ್ಯಕ್ರಮದಲ್ಲಿ ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ ಹಮ್ಮಿಕೊಂಡಿರುವುದು ಅತೀವ ಸಂತೋಷ ತಂದಿದೆ,ನಾನು ಕೂಡ ನನ್ನ ದೇಹವನ್ನು ಈಗಾಗಲೇ ತನ್ನ ಮರಣದ ನಂತರ ಧಾನ ಮಾಡಲಿಕ್ಕೆ ನೊಂದಣಿ ಮಾಡಿಕೊಂಡಿರುವ ಸತ್ಯ ಸಂಗತಿಯನ್ನು ತಿಳಿಸಿ,ಇಂದು ನವಿಲೇಹಾಳು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಊರಿನ ಹಿರಿಯರು- ಕಿರಿಯರು,ಗ್ರಾಮಸ್ಥರು,ಶಾಲಾ ಮಕ್ಕಳು,ಕನ್ನಡ ಮನಗಳು,ಕ.ರ.ವೇ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾಯಿ ಭುವನೇಶ್ವರಿ ಕೃಪೆಗೆ ಪಾತ್ರರಾಗಿರುವುದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮದ್ಯಪಾನ ಒಳ್ಳೆಯ ಅಭ್ಯಾಸ ಅಲ್ಲ,ಯಾರು ಸಹ ಕುಡಿಯಬೇಡಿ ಎಂಬ ಉತ್ತಮ ಸಂದೇಶವನ್ನು ತಿಳಿಸಿದರು.ಎಲ್ಲರೂ ಸಹ ಕನ್ನಡ ಕಲಿಯಿರಿ,ಕಲಿಸಿರಿ,
ಕನ್ನಡವನ್ನು ಉಳಿಸಿರಿ, ಕನ್ನಡ ನಾಡು-ನುಡಿ ಸೇವೆಗೆ ತಮ್ಮ ಸಮಯ ಮೀಸಲಿಡಿ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ನವಿಲೇಹಾಳಿನ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಆಕರ್ಷಣೆಯಾಗಿ,ಎಲ್ಲಾರ ಪ್ರಶಂಸೆಯೊಂದಿಗೆ ಮೆಚ್ಚುಗೆ ಗಳಿಸಿದವು.ಮುಖ್ಯ ಅಥಿತಿಗಳಾಗಿ ಆಗಮನಿಸಿದ್ದ ಚಾಮರಾಜನಗರದ ಸಾಹಿತಿಗಳಾದ ಶ್ರೀ ಕೆ.ಶ್ರೀಧರ್(ಕೆ. ಸಿರಿ)ನವಿಲೇಹಾಳುನ ಸಾಹಿತಿಗಳಾದ ಡಾ.ಶ್ರೀ ಷಕೀಬ್ ಕಣದ್ಮನೆ ರವರು ರಚಿಸಿರುವ ನಮ್ಮೂರು ನವಿಲೂರು ಎಂಬ ಕವನ ವಾಚನ ದೊಂದಿಗೆ ತಮ್ಮ ಮಾತನ್ನು ಪ್ರಾರಂಭಿಸಿ, ಇತಿಹಾಸದ ಪುಟಗಳ ಸಂಗ್ರಹದೊಂದಿಗೆ ನವಿಲೂರು ನವಿಲೇಹಾಳು ಆದ ಸಂಗತಿಯನ್ನು ಬಿಚ್ಚಿಟ್ಟರು.ಹಾಗೂ ನವಿಲೇಹಾಳು ಗ್ರಾಮದಲ್ಲಿನ ಹಿಂದೂ-ಮುಸ್ಲಿಂ ಜನತೆಯ ಬಾಂಧವ್ಯವನ್ನು ಕೊಂಡಾಡಿದರು.
ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಪ್ರದೀಪ್ ರವರು ಮಾತನಾಡಿ ತಮ್ಮ ವ್ಯಾಪ್ತಿಗೆ ಬಂದತಹ ಎರಡು ಸೂಕ್ಷ್ಮ ಅಪರಾಧ ತನಿಖೆಗಳನ್ನು ಕೆಲವೇ ದಿನಗಳಲ್ಲಿ ಗುರುತಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ತಮ್ಮ ಸೇವೆ ಗುರುತಿಸಿ,ಮುಖ್ಯ ಮಂತ್ರಿ ಪದಕ ನೀಡಿದ ಸಂಗತಿಯನ್ನು ತಿಳಿಸಿದರು.
ನಮ್ಮೂರು ಎಲ್ಲಾ ಗ್ರಾಮಸ್ಥರ ಪ್ರೋತ್ಸಾಹದೊಂದಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ,ಸಾಮಾಜಿಕವಾಗಿ ಉನ್ನತ ಅಭಿವೃದ್ಧಿಯೊಂದಿಗೆ ಸ್ವಚ್ಛ ಗ್ರಾಮವಾಗಿ ಹೊರಹೊಮ್ಮಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಲಕ್ಕಿ ನುಡಿತೈತೆ ಕೃತಿ ಬಿಡುಗಡೆ
67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ನವಿಲೇಹಾಳು ಪ್ರತಿಭೆ ಭದ್ರಾವತಿಯ ನವಚೇತನ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ರವರ ಚೊಚ್ಚಲ ಕೃತಿಯಾದ ಹಾಲಕ್ಕಿ ನುಡಿತೈತೆ ಕವನ ಸಂಕಲನವನ್ನು
ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಜಿ.ಮಹೇಶ್ವರಪ್ಪ ರವರು ಮರು ಬಿಡುಗಡೆ ಗೊಳಿಸಿದರು.
ಸನ್ಮಾನ ಕಾರ್ಯಕ್ರಮ
ನವಿಲೇಹಾಳಿನ ಪದ್ಮಶ್ರೀ ಪ್ರೌಢ ಶಾಲೆಗೆ ಭೂ ಧಾನ ಮಾಡಿದ ನಿವಾಸಿಗಳಾದ ಶ್ರೀಯುತ ಎನ್.ವಿ.ಮಂಜುನಾಥ್ ಮತ್ತು ಹಿರಿಯರಾದ ಶ್ರೀಯುತ ದೊಡ್ಡ ಹನುಮಪ್ಪ ರವರನ್ನು, ಮಂಗಳೂರು ವಿಭಾಗದ ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಪ್ರದೀಪ್ ರವರನ್ನು,ಶ್ರೀಮತಿ ಇಂದುಮತಿ ಸಾಲಿಮಠ ರವರನ್ನು,ಶ್ರೀ ಕೆ.ಶ್ರೀಧರ್ ರವರನ್ನು,ನೇತಾಜಿ ಪ್ರೌಢಶಾಲೆ,
ಬಲ್ಲಮಾವಟಿ ಗ್ರಾಮ,ಕೊಡುಗು ಜಿಲ್ಲೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನವಿಲೇಹಾಳು ಗ್ರಾಮದ ಶ್ರೀ ಎನ್.ಕೆ. ಮಹಬೂಬ್ ಸಾಬ್ ರವರನ್ನು, ಸ್ಥಳೀಯ ಪ್ರತಿಭೆಗಳಾದ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕೃತರು,ಶಿಕ್ಷಕ,ಯುವ ಸಾಹಿತಿಗಳಾದ ಶ್ರೀ ಡಿ.ಸನಾವುಲ್ಲಾ ರವರನ್ನು,ಸುದ್ದಿದಿನ ಕನ್ನಡ ದಿನಪತ್ರಿಕೆಯ ಸಂಪಾದಕರು, ಸಾಹಿತಿಗಳಾದ ಶ್ರೀ ಗೋವರ್ಧನ್ ರವರನ್ನು,ರಾಜ್ಯಮಟ್ಟದ ಉದ್ಯೋನ್ಮುಖ ಕಾವ್ಯ ಚೇತನ ಪ್ರಶಸ್ತಿ ವಿಜೇತರಾದ ಯುವ ಕವಿ ಶ್ರೀ ವಿಜಯ್ ಕುಮಾರ್ ರವರನ್ನು,ಕರ್ನಾಟಕ ಶಿಲ್ಪಾಕಲಾ ಅಕಾಡಮಿ ಪ್ರಶಸ್ತಿ ವಿಜೇತರಾದ ಶ್ರೀ ಸದ್ದಾಂ ಹುಸೇನ್ ಸನ್ಮಾನಿಸಲಾಯಿತು.
ನವಿಲೇಹಾಳು ಕ.ರ.ವೇ ಘಟಕದ ಗೌರವಾಧ್ಯಕ್ಷರಾದ ಶ್ರೀ ಜಿ. ಮಹೇಶ್ವರರವನ್ನು,ಈ ದಿನದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಂಡ ಹಾಲಕ್ಕಿ ನುಡಿತೈತೆ ಕೃತಿಯ ಲೇಖಕರಾದ,ಸಾಹಿತಿ ಶಿಕ್ಷಕರಾದ ಶ್ರೀ ಸಿ.ಎಚ್.ನಾಗೇಂದ್ರಪ್ಪ ರವರನ್ನು,
ನವಿಲೇಹಾಳು ಘಟಕದ ಕ.ರ.ವೇ ಅಧ್ಯಕ್ಷರಾದ ಶ್ರೀ ಎಸ್.ಶೇಕ್ ಹುಸೇನ್ ರವರನ್ನು,ನವಿಲೇಹಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಬಿ.ಹೆಚ್.ಶಬ್ ನಮ್ ರವರನ್ನು,ಉಪಾಧ್ಯಕ್ಷರಾದ ಶ್ರೀ ಹನುಮಂತಪ್ಪ ರವರನ್ನು,ಸದಸ್ಯರಾದ ಶ್ರೀ ಎಸ್. ಎನ್.ದೇವಣ್ಣ ರವರನ್ನು,ಪದ್ಮಶ್ರೀ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಪ್ಪ ರವರನ್ನು ಇದೇ ಸಂದರ್ಭದಲ್ಲಿ ಕ.ರ.ವೇ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಕೃಷ್ಣಪ್ಪ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಇಸ್ಮಾಯಿಲ್ ರವರು, ವಂದನಾರ್ಪಣೆಯನ್ನು ಶ್ರೀ ಎನ್. ಎಸ್.ಜಗದೀಶ್ ರವರು ನಡೆಸಿಕೊಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243