ದಿನದ ಸುದ್ದಿ
ಶತದಿನ ಪೂರೈಸಿದ ರಾಜ್ಯ ಸಮ್ಮಿಶ್ರ ಸರ್ಕಾರದ ಶಕ್ತಿ ಏನು ಗೊತ್ತಾ ?
ಸುದ್ದಿದಿನ ಡೆಸ್ಕ್: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಆ.30 ಗುರುವಾರಕ್ಕೆ ನೂರು ದಿನಗಳು ಪೂರೈಸಿವೆ.
ಸರ್ಕಾರ ರಚನೆಯಾದ ದಿನದಿಂದ ಹಲವು ತೊಂದರೆ ಅನುಭವಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಸೇರಿದಂತೆ ಕೆಲವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಗಳ ಸಮಯ್ವದ ಕೊರತೆಯ ಲಾಭ ಪಡೆಯಲು ವಿರೋಧ ಪಕ್ಷ ಬಿಜೆಪಿ ಪ್ರಯತ್ನ ಮುಂದುವರಿಸಿದೆ. ಇನ್ನು ಮಾಧ್ಯಮಗಳು ಕೂಡ ಸರ್ಕಾರದ ಮೇಲೆ “ಒಂದು ಕಣ್ಣು ನೆಟ್ಟಿದ್ದು’ ಆರಂಭದಿಂದ ಇಲ್ಲಿಯವರೆಗೂ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಎಂಬ ತಲೆ ಬರಹ ಹಾಕಿಕೊಂಡು ವರದಿ ಪ್ರಕಟಿಸಿವೆ. ಆದರೆ ಈವರಗೆ ಸರ್ಕಾರ ಅಸ್ತಿತ್ವ ಕಳದೆಕೊಳ್ಳದೇ ಶತದಿನ ಪೂರೈಸಿದೆ.
ಯಡಿಯೂರಪ್ಪ ಫೋನ್ ಟ್ರಾಪ್ ಆಗಿಲ್ಲ : ಜಿ. ಪರಮೇಶ್ ಸ್ಪಷ್ಟನೆ
ರಾಜ್ಯ ಸಮ್ಮಿಶ್ರ ಸರ್ಕಾರದ ಶಕ್ತಿ ಏನು ಗೊತ್ತಾ ?
ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಹೊಂದಾಣಿಕೆ ಕೊರತೆ ಕಾಣುತ್ತಿದೆ. ಇದಕ್ಕಾಗಿ ಸಮನ್ವಯ ಸಮಿತಿ ರಚಿಸಿದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರಿಂದ ಅಸಮಾಧಾನದ ಮಾತುಗಳು ಕೇಳಿಬಂದಿದೆ. ಆದರೆ ಸರ್ಕಾರ ಈವರೆಗೆ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದಕ್ಕೆ ಮುಖ್ಯ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಾಳ್ಮೆ.
ಹೌದು, ಹೀಗೊಂದು ವಿಶ್ಲೇಷಣೆ ನಡೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿರೋಧ ಪಕ್ಷಗಳ ಟೀಕೆ, ಮಾಧ್ಯಮಗಳು ನೆಗೆಟಿವ್ ನೋಟ ಹಾಗೂ ತಮ್ಮದೇ ನಾಯಕರ ಅಸಮಾಧಾನವನ್ನು ಲೆಕ್ಕಿಸದೇ ಶತದಿನ ಪೂರೈಸಿದ್ದಾರೆ.