ದಿನದ ಸುದ್ದಿ
ಹಾಸನ ಹಾಲು ಒಕ್ಕೂಟದ ವತಿಯಿಂದ ಕೇರಳದ ನೆರೆ ಪೀಡಿತ ಪ್ರದೇಶಕ್ಕೆ ನೆರವು
ಸುದ್ದಿದಿನ,ಹಾಸನ: ಕೇರಳದ ನೆರೆ ಹಾವಳಿ ಪೀಡಿತ ಪ್ರದೇಶಕ್ಕೆನೆವಿನ ರೂಪದಲ್ಲಿ ಹಾಸನ ಹಾಲು ಒಕ್ಕೂಟದಿಂದ 1 ಲೋಡ್ ಅಕ್ಕಿ, ಬೇಳೆ ಮತ್ತು 1 ಲೋಡ್ ಹಾಲನ್ನು ರವಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಈ ಲಾರಿಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಕೇರಳದ ಆಲಪಿ ಜಿಲ್ಲೆ ಕುಟ್ಟನಾಡು ಪ್ರದೇಶಕ್ಕೆ ಈ ಲಾರಿಗಳು ತೆರಳಲಿದೆ, ರಾಜ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ದಿ ಇಲಾಖೆಯ ಎಂ.ಡಿ. ಜಯರಾಂ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾದ ಕೃಷ್ಣ ರೆಡ್ಡಿ, ಅಧೀಕ್ಷಕ ಇಂಜಿನಿಯರ್ ರಾಜ್ ಕುಮಾರ್ ರೆಡ್ಡಿ, ರೈಲ್ವೇ ಇಲಾಖೆ ನಿರ್ಮಾಣ ವಿಭಾಗದ ಮುಖ್ಯ ಕಾರ್ಯದರ್ಶಿಗಳಾದ ಅಲೋಕ್ ತಿವಾರಿ, ಎ.ಡಿ.ಆರ್.ಎಂ ಅಜಯ್ ಸಿನ್ಹಾ, ಉಪಮುಖ್ಯ ಇಂಜಿನಿಯರ್ ಬಿ ರಮೇಶ್ ಚಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮಂಜುನಾಥ್, ಹಾಸನ ಹಾಲು ಒಕ್ಕೂಟದ ಎಂ.ಡಿ. ಗೋಪಾಲಸ್ವಾಮಿ ಮತ್ತಿತ್ತರರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401