ಸಿನಿ ಸುದ್ದಿ
ಕಿಚ್ಚ ಸುದೀಪ್ ದಾವಣಗೆರೆ ಗೆ ಏಕೆ ಬರಲಿಲ್ಲ ಗೊತ್ತಾ ?
ಸುದ್ದಿದಿನ, ದಾವಣಗೆರೆ (ಅ.1): ಖ್ಯಾತ ನಟ ಕಿಚ್ಚ ಸುದೀಪ್ ಸೆ.30ರ ಭಾನುವಾರ ದಾವಣಗೆರೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರದಿಂದ ಸುದೀಪ್ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ವಿಡಿಯೋ ಮೂಲಕ ಸುದೀಪ್ ಕ್ಷಮೆ ಕೇಳಿದ್ದಾರೆ.
ನಿರ್ದೇಶಕ ನಂದ ಕಿಶೋರ್ ಒಡೆತನದ ದೊನ್ನೆ ಬಿರಿಯಾನಿ ಹೋಟೆಲ್ ಉದ್ಘಾಟನೆಗೆ ನಗರಕ್ಕೆ ಆಗಮಿಸಬೇಕಿತ್ತು. ಈ ಕುರಿತು ಕಿಚ್ಚ ಮುಂಚಿತವಾಗಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ತಿಳಿಸಿದ್ದರು. ಆದರೆ ಅನ್ಯ ಕಾರ್ಯಗಳ ಹಿನ್ನೆಲೆಯಲ್ಲಿ ದಾವಣಗೆರೆಗೆ ಬರಲು ಸಾಧ್ಯವಾಗಿಲ್ಲ. ಮತ್ತೊಂದು ವಿಡಿಯೋ ಮಾಡಿರುವ ಕಿಚ್ಚ ಸುದೀಪ್ ಹೀಗೆ ಹೇಳಿದ್ದಾರೆ.
ಎಲ್ಲರಿಗೂ ಕಿಚ್ಚನ ಸಮಸ್ಕಾರ, ನಾನು ದಾವಣಗೆರೆಯಲ್ಲಿರುವ ಒಂದು ಹೋಟೆಲ್ ಓಪನಿಂಗ್ ಗೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ, ನಾನು ಅ.19 ರಂದು ಬರುತ್ತಿದ್ದೇನೆ ಎಂದಿದ್ದಾರೆ.