ಬಹಿರಂಗ
ಕಿಂಗ್ v/s ಕಿಂಗ್ ಮೇಕರ್
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು………..ಅಂತಾ ಹಿಂದೆ ಈ ಸಾಂಗ್ ನ ನೀವೆಲ್ಲಾ ಕೇಳಿದ್ರ ಅಲ್ವಾ??? ಇವಗಾ ಇದೆ ತರ ಇನ್ನೊಂದು ಸಾಂಗ್ ನಾನೆ ಹೇಳ್ತೀನಿ ಕೇಳಿ.., *ತೆನೆ ಹೊತ್ತ ಹೆಂಗಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು* ಹೌದು ಈ ಮಾತ್ನಾ ಇವ್ನು ಯಾಕೇಳ್ತಾವ್ನೆ ಅಂತಾ ಅನ್ಕೊಂಡ್ರ ಅದ್ಕೂ ಒಂದು reason ಅಯ್ತೆ … ತಿಂಗಳಾರ ಗಟ್ಲೆ ಹೋಡಾಡ್ಕೊಂಡು ಪ್ರಚಾರ ಮಾಡ್ಕೊಂಡು, ಸಿಕ್ ಸಿಕ್ಕೋರ್ ಕಾಲಿಗೆಲ್ಲಾ ಬಿದ್ಕೊಂಡು ಎಲೆಕ್ಷನ್ ನ ಮಾಡಿದ್ರು . ಇವತ್ತು ಆ world ವಾರ್ ಗೆ seal ಒತ್ತಿದಾಯ್ತು… Certificate ಕೊಟ್ಟಿದಾಯ್ತು. ಅಂದ್ರೆ final ರಿಸಲ್ಟ್ ಬಂದಿದಾಯ್ತು… ನೀವೇನು ತುಂಬಾ ದಿನಗಳಿಂದ ಕಾತುರದಿಂದ ಕಾಯ್ತಿದ್ರ ಕರ್ನಾಟಕದ ಕುರುಕ್ಷೇತ್ರ ಕ್ಕೆ ತೆರೆ ಬಿದ್ದಾಯ್ತು.. ಕೆಲವರು ಗೆದ್ದಾಯ್ತು , ಮೆರಿತ್ತಿದವ್ರು ಸೋತಾಯ್ತು… ಎಲ್ಲಾರ ಲೆಕ್ಕಾಚಾರನು ಉಲ್ಟಾ ಹೊಡೆದಾಯ್ತು…
ದೊಡ್ಡ ದೊಡ್ದ minister ಗಳನ್ನಮನೆಗ್ ಕಳ್ಸಿದ್ದು ಆಯ್ತು.. ಹೊಸ ಹುಡುಗ್ರುನ್ನ 3 ನೇ ಮಹಡಿಗೆ ತಳ್ಳಿದ್ದು ಆಯ್ತು… ಅವ್ರೇನ ಕಿತ್ ದಬ್ಬಾಕ್ತರೋ ನೋಡ್ಬೇಕು??
ಬಿಡಿ ಎಲ್ಲರ್ಗೂ ಗೊತ್ತಾಯ್ತು… ಇನ್ನೇನಿದ್ರು ಚದುರಂಗದಾಟ ಶುರು ಮಾಡೋ ಸಮಯ…
ನಂಗೆ ಒನ್ ಚಿಕ್ಕ flashback ಕಥೆ ನೆನ್ಪಾಯ್ತು , ನನ್ನ ಕನ್ನಡ madium ಇಂದ 8ನೇಕ್ಲಾಸ್ ಗೆ ಇಂಗ್ಲಿಷ್ medium ಗೆ ಸೇರ್ಸುದ್ರು ಅವಾಗ 8ನೇಕ್ಲಾಸಿನ್ result ಬಂತು ಆ ಟೈಮ್ ನಲ್ಲಿ ನಮ್ ಊರಿನ್ ಹುಡ್ಗಿ ಬೆಂಗಳೂರಲ್ಲಿ ಓದ್ತಿದ್ಲು 95% ಏನೋ ತಗೊಂಡಿದ್ಲಂತೆ ಆದ್ರೆ results ಬಂದಿದ್ ದಿನ ಮಾರ್ಕ್ ಕಡಿಮೆ ಆಯ್ತು ಅಂತಾ ಸಿಕ್ಕಾ ಪಟ್ಡೆ ಅಳ್ತಿದ್ಲು … ಇನ್ನೊಂದ್ ಕಡೆ ನಾನು ನಮ್ ದೋಸ್ತಿ ಸ್ಕೂಲ್ ಕಾಂಪೌಂಡ್ ಮೇಲೆ ಕೂತ್ಕೊಂಡು ಜಯಮ್ಮನ್ ಅಂಗಡಿ ಕಾರಸೇವೆ ಇನ್ಕೊಂಡು ಅರಾಮಾಗ್ ಇದ್ದೋ … ಆಗ ನಂದು 48 % ಮಾರ್ಕ್ಸ್ ..ಅಮೇಕ್ ಮುಂದುಕ್ ಏನೆ ಬೇಕು ಅಂದ್ರು ನನ್ನತ್ರನೆ ಕೇಳಕ್ ಬರ್ತಿದ್ಲೂ… ಎಲ್ಲೆ ಹೊಗ್ಬೇಕು ಅಂದ್ರು ನನ್ನೆ ಕರ್ಕೊಂಡು ಹೋಗ್ತಿದ್ಲು… ಅವಳು 95 ತಗ್ದಿದ್ರು ನನ್ ಬಿಟ್ ಏನು ಮಾಡಂಗ್ ಇರ್ಲಿಲ್ಲ…
ಇವನ್ಯಾರ ಇದನ್ಯಾಕ್ ಹೇಳ್ತಾವ್ನೇ ಅನ್ಕೋಬೋದು ಅಲ್ಲೆ ನೋಡಿ ಇರದು…
ಇವತ್ತಿನ ಫಲಿತಾಂಶ ಎಲ್ಲಾರು ನೋಡಿದ್ದೀರ , ಏನಾಯ್ತು… ನೆನ್ನೆನೆ ದಾವಣಗೆರೆಯಲ್ಲಿ ರಾತ್ರೋ ರಾತ್ರಿನೆ ಮಳೆ ಬಂದಾಗ್ಲೆ ಹೇಳ್ದೆ ನಾಳೆ ಬೆಳಗ್ಗೆ ಬೆರಕೆ ಕಟ್ಟಿದ್ ಸಾಂಬಾರೆ ಗತಿ ಅಂತ!!! ಹಂಗೆ ಆಯ್ತಾಲ…!!!
ಇಷ್ಟ್ ದಿನ ಅಲ್ಲಾಡ್ಸಿದ್ ಕೈ ಬಿದ್ದೋಯ್ತು… ಕೆರೆ ಹೂವ ದೊಡ್ಡದಾಯ್ತು… ಗದ್ದೆ ಭತ್ತ ಎಳ್ಸಾಗೇ ಹೋಯ್ತು , ಈಗ ಕೈಗೆ ಉಸಿರಾಯ್ತು…
ಜೈಲ್ಗೋಗ್ ಬಂದವ , ಜೈಲ್ಗೋಗ್ ಬಂದವ ಅಂತಾ ಹೋಗಿದ್ ಕಡೆ ಎಲ್ಲಾ ಜರಿತಿದ್ ಸಿದ್ರಾಮಣ್ಣ , ಜೈಲ್ಗೋಗ್ ಬಂದೋರ್ಗೆ ಜಾಸ್ತಿ ಕೊಟ್ ಬಂದಾವ್ರೆ….
ನಮ್ ಸೂಟು ಬೂಟು ತಾತ ರಾಜ್ಯ ಸುತ್ತಿ ಸುತ್ತಿ ಕೊನೆಗು ತಮ್ ಬುಟ್ಟಿಗೆ 104 ಹಾಕೋಬಿಟ್ರು. ಇನ್ನು ಒನ್ ಮ್ಯಾನ್ ಆರ್ಮಿ ಸಿದ್ರಾಮಣ್ಣನ ಮೈಸೂರ ಬಿಡ್ಸಿ ಬಾದಾಮಿನಲ್ಲಿ ಎಬ್ಸಿ 78 ಹಿಡ್ಸುದ್ರು… ಇನ್ನಾ ಹೋಂ ಟೀಂ ಕುಮಾರಣ್ಣ ಒಂದ್ ಸರಿ ಮಾಡಿದ್ mistakes ಇಂದಾ ಇನ್ನು ಸುದಾರ್ಸ್ಕೋತಾವ್ರೆ.. ಒಂದ್ ಚಾನ್ಸ್ ಕೊಟ್ ನೋಡಿ ಅಂತಾ ಕೇಳ್ಕೊಂಡ್ರು .. ಆದ್ರೇನ ಪ್ರಯೋಜನ ಮನೆ ಒಂದು ಮೂರು ಬಾಗಿಲು ಅಂದಾಂಗೆ ಮನೆ ಜಗಳ ಊರ್ನೊರ್ಗೆ ಗೊತ್ತಾದ್ರೆ ಹೆಂಗೆ…? ಹಿಂಗೆನೆ..!! ಹಂಗೋ ಹಿಂಗೋ , ಅಲ್ಲಲ್ಲಿ ಕೈ ಕಟ್ ಮಾಡಿ , ಕೆರೆಲಿ ತಾವರೆ ಹೂವ ಕಿತ್ತಾಕಿ 38 ಮಾಡ್ಕೋಬಿಟ್ರು… ಈಗಾ ಅಲ್ಲೆ ಇರದು ನೋಡಿ ಆಟ…ಬಗುಣಿ ಗೂಟ…!!!
ಮ್ಯಾಜಿಕ್ ನಂಬರ್ ಆಡ್ಬೇಕು ಅಂದ್ರೆ , ಯಡ್ಯೂರ್ ಗೆ ಇನ್ನೂ ಲಕ್ಕಿ ನಂಬರ್ 9 ಬೇಕೆ ಬೇಕು… Distinction ತಗೊಂಡ್ರು grace ಮಾರ್ಕ್ಸ್ ಇಲ್ದಲೆ ಪಾಸ್ ಆಗಲ್ಲ…
ಮ್ಯಾಜಿಕ್ ಮಾಡ್ದಲೆ ಆಟ ಆಡಕ್ ಆಗಲ್ಲ.. ಇನ್ನಾ
ಆಪರೇಷನ್ ಮಾಡಕ್ ಟೈಮ್ ಇಲ್ಲಾ ..!! ಕಾಳ್ ಹಾಕಕ್ ನೋಡ್ತಾವ್ರೆ ಇನ್ನೂ ಯಾವ್ ಕುರಿನು ಸಿಕ್ಕಿಲ್ಲ.. ಅಲ್ದೆ ಹೋಂ ಟೀಂ ಅಂತು ಸೇರಲ್ಲ ಅನ್ಕೊಂಡು , ಕೋರ್ಟು ಕಛೇರಿ ಅಂತಾವ್ರೆ….
ಆದ್ರೆ ನಮ್ ಸಿದ್ರಾಮಣ್ಣ ಸುಮ್ನೀರ್ತಾರ?? ಇರಲ್ಲಾ..???
ಅವರ್ ಅಪ್ಪನಾಣೆ ಅವನು ಸಿಎಂ ಆಗಲ್ಲ ಅಂತಿದ್ ಸಿದ್ದಣ್ಣ ಅವರ್ ಅಪ್ಪನೆ ಬೇಕು ಅಂತಾವ್ರೆ..
ಹಳೆ ಹೆಂಡ್ರು ಪಾದವೇ ಗತಿ ಅಂದಂಗೆ ಇರೋ ಬರೋರ್ ನೆಲ್ಲಾ ಎತ್ತಾಕೊಂಡು, ಪವರ್ ಸಪ್ಲೈ ಇಟ್ಕೊಂಡು ದೊಡ್ ಗೌಡ್ರು ಕಡೆ ಮುಖ ಮಾಡ್ಕೊಂಟು, ಹೆಗ್ಲು ಮೇಲೆ ಟವಲ್ ಹಾಕೊಂಡು ಓಡ್ ಬಂದವ್ರೆ…
ಹಿಂದೆ ಫುಲ್ ಇನ್ನಿಂಗ್ಸ್ ಆಟ ಆಡಿದ್ ಕ್ಯಾಪ್ಟನ್ ಕೂಲ್ ಸಿದ್ರಾಮಣ್ಣನು 78 ತಗೊಂಡ್ರು . ಇರೋ 38ನ ಬಿಡಕ್ ಹಾಗ್ತಿಲ್ಲ… ಅವರ್ನ ಬಿಟ್ರೆ ಕೆಟ್ವಿ ಅನ್ಕೊಂಡು ಕೈ ಕಟ್ ಕುಂತವ್ರೆ…
ಇಬ್ರು ಸೇರುದ್ರೆ 116 ಆಯ್ತಿವಿ, ಅಂಗೋ ಇಂಗೋ 3 ನಾಮ ಆಕುದ್ರು 113 , ಸಾಕಲ್ಲ ಆಡಕ್ಕೆ ಗೇಮ್ ಅಂತಾ ರಾಜ್ಯಪಾಲರ ಕಡೇ ಹೊಂಟವ್ರೆ…
ಇನ್ನಾ ಇರೋ ಕುದುರೆ ಗಳನ್ನ ಹಾರಿಸ್ಕೊಂಡ್ ಹೋದ್ರೆ ಕಷ್ಟ ಅನ್ಕೊಂಡು ರೆಸಾರ್ಟ್ ಗೆ ಅಟ್ಟಕ್ಕೆ ಪ್ಲಾನ್ ಹಾಕವ್ರೆ… ಮಲ್ಲು ಆಂಟಿ ಊರಿಗೋ , ಭಲ್ಲೇ ಭಲ್ಲೇ ಬಾರ್ಗೋ ಗಾಡಿ ಬಿಡ್ತಾವೆ…
ನೋಡ್ಬೇಕು ಎಷ್ಟೆಷ್ಟ್ ಕುದುರೆಗಳು ಸೇಲ್ ಆಯ್ತವೋ ,ಇಲ್ಲಾ ಹೈಜಾಕ್ ಆಯ್ತವೋ !! ಇಲ್ಲಾ ಸೂಟ್ ಆಸೆಗೆ ಅವೇ ಬಿಟ್ ಓಡೋಯ್ತವೋ !!! ನಿಯತ್ತಾಗಿ ಟಿಕೆಟ್ ಕೊಟ್ಟು ಗೆಲ್ಸಿದ್ಕೆ ಬಾಲ ಹಿಡಿತವೋ ??? ಏನೆ ಆದ್ರೂ ಕುದುರೆ ಬಾಲಕ್ ಈ ಟೈಮ್ ನಲ್ಲಿ ಕಟ್ಟೋ ಬೆಲೆ ಎಲ್ಲೂ ಕಟ್ಟಲ್ಲ… ಹಂಗಾಗಿ ಇರೋ 38ರ ಮೇಲೆ ಕಣ್ಣಾಂಕ್ತಂಗೆ ಸೇಪ್ ಮಾಡ್ತವ್ರೆ… ಯಾಕಂದ್ರೆ ಈ ರೆಸಾರ್ಟ್ ರಾಜಕೀಯ ಹೊಸದಲ್ಲ ಇವ್ರಗೆ .. ಹೋದ್ ರಾಜ್ಯ ಸಭೆ ಎಲೆಕ್ಷನ್ ನಲ್ಲಿ 8 ಕುದುರೆ ಹೋಡೋದೋ ಅದ್ರಲ್ಲಿ ಕೆಲವೂ ಬದಿಕೊಂಡೋ, ಇನ್ ಕೆಲವೋ ಮನಿಕೊಂಡೋ…
ಇನ್ನೂ ಕೆಲವರ
ಸ್ಥಿತಿ ಹೇಗಾಯ್ತು ಅಂದ್ರೆ ಮ್ಯಾನೇಜರ್ ಹತ್ತಿರ ಜಗಳ ಆಡ್ಕೊಂಡು ಬೇರೆ ಕಂಪನಿ ಸೇರಿದ್ರೆ, ಸೇರ್ಕೊಂಡ ಕಂಪನಿನಲ್ಲೂ ಹಳೆ ಮ್ಯಾನೇಜರ್ ಬಂದು ಬಾಸ್ ಆಗಿದ್ದಾನೆ ಅನ್ನಂಗೆ …
ಏನೆ ಆದ್ರೂ ಹಿಂದೆ ರಾಜ್ಯಭಾರ ಮಾಡಿದ್ ಯಾವ ರಾಜನೂ ಕೂಡ , ಪಟ್ಟ ಹಿಡಿಲಿಲ್ಲ , ಇವಾಗ ಅವರ್ ಅವರ್ ಮುಖ ಅವರ್ ಅವ್ರೆ ನೋಡ್ಕೊಂಡು ಹಿತ್ತಲೂ ಮನೆ ದಾರಿ ಹಿಡಿತಾವ್ರೆ…
ಲಾಸ್ಟ್ ಗೋವಾ , ಮಣಿಪುರಿ ಎಲೆಕ್ಷನ್ ನಲ್ಲೂ ಕೂಡ ನಮ್ ಮೋದಿ ತಾತ ಸಕ್ಕತ್ ಕಿಕ್ ಕೊಟ್ಟಿದ್ರು, ಬಹುಮತ ಇಲ್ಲಾ ಅಂದ್ರು ಗೋವಾ ಬೀಚಲ್ಲಿ ಬಾವುಟ ಹಾರ್ಸಿದ್ರು… ಅಮೇಲೆ ಗೆದ್ದಿದ್ ಎರಡೇ ಸೀಟ್ ಇಡ್ಕೊಂಡು ಮಣಿಪುರಿ ನಲ್ಲಿ ಮಾವಿನ ಹಣ್ಣು ತಿನ್ಸಿದ್ರು… ಈಗ್ಲೂ ಏನಾದ್ರು ಗೇಮ್ ಪ್ಲಾನ್ ಮಾಡ್ದಲೇ ಇರಲ್ಲಾ … ಯಾಕಂದ್ರೆ ನಮ್ ರಂಗಣ್ಣನ್ ಚಾಣಾಕ್ಷ ಬೇರೆ ಸುಮ್ನಿರಲ್ಲಾ..
ಈ ಹಿಂದೆ ಆಗಿದ್ ತಪ್ಪ್ಗೆ ನಮ್ ಪಪ್ಪು ಈಗ್ಲಾದ್ರು ಅವರ ಬಾಣನೇ ಅವ್ರಗೆ ತಿರ್ಗಿಸ್ ಬಿಡ್ತರಾ ನೀವೆ ನೋಡ್ಬೇಕು…
ಇಷ್ಟೆಲ್ಲಾ ಆದ್ಮೇಲು ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ… ಈ ಸಾರಿ ಸಿಎಂ ಯಾರು… ???
ಏನಾದ್ರು ಆಗ್ಲಿ ರೀ , ಯಾರದ್ರೂ ಬರ್ಲಿ ರೀ ಕನ್ನಡನ , ಕರ್ನಾಟಕನ ಉದ್ದಾರ ಮಾಡ್ಲಿ, down to earth ಅನ್ನಂಗೆ ಬಗ್ಗಿ ನಡಿಲಿ… ನಮ್ಮಂಥ ಓದ್ ದಬ್ಬಾಕಿದ್ ಎಷ್ಟೋ ಹುಡುಗರ್ಗೆ ಒಳ್ಳೆ ಕೆಲಸ ಕೊಡ್ಲಿ..
ನಂಗೂ freedom of speech ಇದೆ…
–ನಿಮ್ಮನೆ ಹುಡ್ಗ
ವಿದ್ಯಾರ್ಥಿ ಮಿತ್ರ ಕಿರಣ್