ದಿನದ ಸುದ್ದಿ

ಚುನಾವಣೆ ರವಾನಿಸಿದ ಪಾಠಗಳು: ಡಾ.ಎನ್.ಕೆ.ಪದ್ಮನಾಭ್

Published

on

ರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಸ್ತುತ ಮಾಧ್ಯಮಗಳ ಜವಾಬ್ದಾರಿತನ,ಹಾಗೂ ಇಂದಿನ ಪತ್ರಕರ್ತರ ಬದ್ಧತೆ ಕುರಿತು ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಕೆ. ಪದ್ಮನಾಭ್ ಅವರ ಅನಿಸಿಕೆಗಳು.

  1. ಸುದ್ದಿ ಮಾಧ್ಯಮಗಳನ್ನು ಮುಗ್ಧವಾಗಿ ನಂಬಬಾರದು.ನಂಬುವ ಮುನ್ನ ಯೋಚಿಸಬೇಕು.
  2. ಸುದ್ದಿ ವಾಹಿನಿಗಳು ರಾಜಕೀಯ ಪಕ್ಷಗಳ ಹಣದ ಹಂಗಿನ ಅಮಲಿನಲ್ಲಿ ಮುಳುಗಿದಾಗ ನಾವು ಎಚ್ಚರವಾಗಿರಬೇಕು.
  3. ಮುಖಪುಟಗಳಲ್ಲಿ ಜಾಹಿರಾತುಗಳು ಬಂದಾಕ್ಷಣ ರಾಜಕೀಯ ಪಕ್ಷಗಳನ್ನು ಆರಾಧಿಸಬಾರದು.
  4. ಟಿವಿಯಲ್ಲಿ ಕಾಣಿಸಿಕೊಳ್ಳುವ ಆ್ಯಂಕರ್ ಗಳ ಬಾಲ್ಯಾವಸ್ಥೆಯ ಅಪ್ರಬುದ್ಧ ಮಾತುಗಳು ಮತ್ತು ಪ್ರಶ್ನೆಗಳ ಮೋಡಿಗೆ ಒಳಗಾಗಬಾರದು.
  5. ಸುದ್ದಿ, ಸಂಪಾದಕೀಯ ಮತ್ತಿತರ ಬರಹಗಳನ್ನು ವಿವೇಕದೊಂದಿಗೆ ಗಮನಿಸಬೇಕು.
  6. ಟಿವಿಯವರ ಆವೇಶಭರಿತ ಮಾತುಗಳಲ್ಲಿನ ಟೊಳ್ಳುತನವನ್ನು ತಕ್ಷಣವೇ ಪತ್ತೆ ಹಚ್ಚಬೇಕು.
  7. ಹಿಂದಿನ ಸಕಾರಾತ್ಮಕ ಮಾದರಿಗಳ ಬಗ್ಗೆ ತಿಳಿದುಕೊಂಡ, ಸಮಗ್ರ ಓದು ತಮ್ಮದಾಗಿಸಿಕೊಂಡವರ ವಿಶ್ಲೇಷಣೆಯ ನಿರೀಕ್ಷೆಯೊಂದಿಗಿರಬೇಕು.
  8. ಓದಿಕೊಳ್ಳದೇ, ತಿಳಿದುಕೊಳ್ಳದೇ ಬಾಯಿಗೆ ಬಂದಂತೆ ಒದರುವದು ಮಾಧ್ಯಮ ವೃತ್ತಿಪರ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿಕೊಳ್ಳಬೇಕು.
  9. ಜನರ ಹೆಸರಲ್ಲಿ ಕೂಗುವ, ಚೀರುವ, ಜಗಳಕ್ಕೆಳೆಸುವ ವಿತಂಡವಾದಿಗಳು ಟಿವಿಯಲ್ಲಿ ಕಾಣಿಸಿಕೊಂಡಾಕ್ಷಣ ಚಾನಲ್ ಚೇಂಜ್ ಮಾಡಬೇಕು.
  10. ಪತ್ರಿಕೆಗಳ ಪುಟಗಳು ಅಧಿಕಾರ ರಾಜಕಾರಣದ ಹುನ್ನಾರಗಳಿಗೀಡಾಗಿ ಕಲುಷಿತಗೊಂಡಾಗ ಧಿಕ್ಕರಿಸುವ ವಿವೇಚನೆ ಪ್ರದರ್ಶಿಸಬೇಕು.
  11. ಚುನಾವಣೆಯ ಕಣ ಎಂದರೆ ಮನರಂಜನೆಯ ಅಖಾಡ ಅಲ್ಲ ಎಂಬುದನ್ನು ಮುಂದಿನ ಚುನಾವಣೆಗೆ ಮುನ್ನವೇಗೊತ್ತುಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

Trending

Exit mobile version