ರಾಜಕೀಯ
ಬಿಜೆಪಿ ಕೆಟ್ಟ ರಾಜಕಾರಣ ಮಾಡೋದು ಬಿಡಲಿ : ಡಿ.ಕೆ.ಶಿ ಟಾಂಗ್
ಸುದ್ದಿದಿನ, ಬೆಂಗಳೂರು : ಬಿಜೆಪಿ ಅವ್ರು ಕೆಟ್ಟ ರಾಜಕಾರಣ ಮಾಡೋದು ಮೊದಲು ಬಿಡಲಿ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬರ್ ಮುಖ್ಯ.ಬಿಜೆಪಿ ಅವ್ರು ತುಂಬ ಆತುರದಲ್ಲಿ ಇದ್ದಾರೆ. ನೂರು ದಿನಕ್ಕೆ ಬಿಜೆಪಿ ಟಿಕೆ ವಿಚಾರವಾಗಿ ಡಿಕೆಶಿ ಬಿಜೆಪಿಗೆ ಟಾಂಗ್ ನೀಡಿದರು.
ಅವರು ಏನೇನು ಮಾಡ್ತಿದ್ದಾರೆ, ಯಾರಿಗೆ ಆಮಿಷ ಒಡ್ಡುತ್ತಿದ್ದಾರೆ ನನಗೆ ಗೊತ್ತು.ಯಾವ ಶಾಸಕರ ಜೊತೆ ಮಾತಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ ಅಂತ ಬಿಜೆಪಿ ಅವ್ರು ತಿಳಿದುಕೊಂಡಿದ್ದಾರೆ.ನಮಗೆ ಎಲ್ಲಾ ಗೊತ್ತಿದೆ. ಸದ್ಯ ನಾನು ಈ ಬಗ್ಗೆ ಮಾತಾಡೊಲ್ಲ.ಟೈಂ ಬಂದಾಗ ಯಾರು ಯಾರು ಯಾರ ಜೊತೆ ಮಾತಾಡಿದ್ದಾರೆ ಅಂತ ಅವರೇ ಹೇಳ್ತಾರೆ ಎಂದು ಗುಡುಗಿದರು.
ಯಡಿಯೂರಪ್ಪ, ಶೆಟ್ಟರ್, ಶ್ರೀರಾಮುಲು ಸರ್ಕಾರ ಬಿದ್ದು ಹೋಗುತ್ತೆ ಅಂತ ಮಾತಾಡಿದ್ದಾರೆ.ವಾರ,ದಿನ, ಗಂಟೆ ಮೂಹೂರ್ತ ಎಲ್ಲಾ ಫಿಕ್ಸ್ ಮಾಡ್ತಿದ್ದಾರೆ.ಹಿಂದೆಯೂ ಮಾಡಿದ್ರು,ಈಗಲೂ ಮೂಹೂರ್ತ ಫಿಕ್ಸ್ ಮಾಡ್ತಿದ್ದಾರೆ.ಶುಭವಾರ, ಶುಭ ನಕ್ಷತ್ರ ಶುಭ ಘಳಿಗೆ ಎಲ್ಲಾ ಮಾಡ್ತಿದ್ದಾರೆ ಡಿ ಕೆ ಶಿವಕುಮಾರ್ ಗರಂ ಆದರು.