ದಿನದ ಸುದ್ದಿ
ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ..!
ಸುದ್ದಿದಿನ,ಕೋಲಾರ : ಪೋಷಕರಿಂದ ಪ್ರೀತಿಗೆ ತಿರಸ್ಕಾರ, ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗಡಿ ಆಂಧ್ರದ ಕುಪ್ಪಂ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ತಮಿಳುನಾಡಿನ ತಿರುವೆಲ್ಲೂರು ಮೂಲದ ಪ್ರೇಮಿಗಳು, ಜಿ.ಎಸ್.ಮೌನಿಷ(21) ಹಿಮಚಂದ್ರ(22) ಕುಪ್ಪಂ ನ ಅನ್ನಾಮಲೈ ವಿಶ್ವ ವಿದ್ಯಾಲಯದ ಅಂತಿಮ ಬಿಎಸ್ ಸಿ ವಿದ್ಯಾರ್ಥಿ ಗಳು ಆತ್ಮಹತ್ಯೆ
ಮಾಡಿಕೊಂಡವರಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401