ದಿನದ ಸುದ್ದಿ
ನಾಗವಲ್ಲಿಗಾಗಿ ರಾರಾ ಹಾಡು ಬರೆದ ಕವಿ ಗೋಟೂರಿ ಇನ್ನಿಲ್ಲ
ಸುದ್ದಿದಿನ ಡೆಸ್ಕ್: ಆಪ್ತ ಮಿತ್ರ ಸಿನಿಮಾದಲ್ಲಿನ ಪ್ರಸಿದ್ಧ ರಾ ರಾ ಗೀತೆಯನ್ನು ರಚಿಸಿದ ಖ್ಯಾತ ಗೀತೆ ರಚನೆಗಾರ, ನಿರ್ದೇಶಕ, ನಟ ಗೋಟೂರಿ ಗುರುವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು ಅವರು ಯಲಹಂಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.
ಶ್ ಚಿತ್ರದಲ್ಲಿ ನಾಯಕಿ ತಂದೆಯಾಗಿ, ಮಠ ಚಿತ್ರದಲ್ಲಿ ಗುರುಗಳಾಗಿ ಕೂಡ ಅಭಿನಯಿಸಿದ್ದ ಇವರು ಪ್ರಖ್ಯಾತ ಗೀತೆಗಳನ್ನು ಬರೆದಿದ್ದಾರೆ.
ರಾಮಾ ಶ್ಯಾಮ ಭಾಮಾ ಚಿತ್ರದ ಜ್ವಾಪಾನಾ ರಾತ್ರಿಯಾಯ್ತು ಇವರ ಮತ್ತೊಂದು ಪ್ರಸಿದ್ಧ ಹಾಡು.
ಚಿತ್ರರಂಗದ ಅನೇಕರು ಗೊಟೂರಿ ಅವರ ನಿಧನಕ್ಕೆ ಕಂಬನಿ ನುಡಿದಿದ್ದಾರೆ.