ದಿನದ ಸುದ್ದಿ

ಮಾಯಕೊಂಡ | ಹಿರೇಮದಕರಿನಾಯಕ ಜೀರ್ಣೋದ್ಧಾರ ಸಮಿತಿಯ ತಿಂಗಳ ಸಭೆ : ಸನ್ಮಾನ

Published

on

ಸುದ್ದಿದಿನ, ದಾವಣಗೆರೆ : ಮಾಯಕೊಂಡದ ಹಿರೇಮದಕರಿನಾಯಕ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಭಾನುವಾರ ತಿಂಗಳ ಸಭೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಹುಚ್ಚವನಹಳ್ಳಿ ಗ್ರಾಮದ ಕೆಜಿ ಸತೀಶ್ ಮತ್ತಿ ಪಂಚಾಯಿತಿಯ ಎನ್. ಎಂ. ಮಂಜುನಾಥ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಎಂಎಸ್ಸಿ ಫುಡ್ ಟೆಕ್ನಾಲಜಿ ವಿಭಾಗಕ್ಕೆ ಪ್ರಥಮ ಸ್ಥಾನ ಗೋಲ್ಡ್ ಮೆಡಲ್ ಗಳೆಸಿದ ಸಮಾಜದ ಎನ್ ವಿನಯ್ ಗೆ ಸನ್ಮಾನಿಸಲಾಯಿತು.

ಸಭೆಯಲ್ಲಿ ಸುನಿಲ್ ಜಿಎಲ್ ಹುಚ್ಚವನಹಳ್ಳಿ, ಕಂಬರಾಜ್ ದೊರೆಸ್ವಾಮಿ, ದೇವರಾಜ್, ರಂಗಸ್ವಾಮಿ, ಶಿವಕುಮಾರ್, ಶ್ರೀಧರ್ , ಶಶಿಧರ್ ಹಾಗೂ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version