ದಿನದ ಸುದ್ದಿ

ಮದ್ದೂರು ಪೋಲೀಸ್ ಠಾಣೆಗೆ ನೂತನ ಎಸ್.ಐ ಆಗಿ ಮಂಜೇಗೌಡ ಅಧಿಕಾರ ಸ್ವೀಕಾರ

Published

on

ಸುದ್ದಿದಿನ, ಮದ್ದೂರು : ಇಂದು ಅಧಿಕಾರ ಸ್ವೀಕರಿಸಿದ ಸಬ್ ಇನ್ಸ್ಪೆಕ್ಟರ್ ಮಂಜೇಗೌಡ ರವರು ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆಯನ್ನು ನೂತನ ಪುರಸಭಾ ಜನಪ್ರತಿನಿಧಿಗಳು ಸಮ್ಮುಖದಲ್ಲಿ ಸಭೆಯನ್ನು ನಡೆಸಿದರು.

ಸಬ್ ಇನ್ಸ್ಪೆಕ್ಟರ್ ರವರು ಮಾತನಾಡಿ ಸರ್ಕಾರದ ನಿಯಮಗಳನ್ನು ಪ್ರಕಾರ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥವಾಗಿ ಆಚರಿಸ ಬೇಕೆಂದು ತಿಳಿಸಿದರು.ಮದ್ದೂರು ಪೋಲೀಸ್ ಠಾಣೆಗೆ 20 ಅರ್ಜಿಗಳು ಬಂದಿದ್ದು ಅದರಲ್ಲಿ 5 ಅರ್ಜಿಗಳಿಗೆ ಅನುಮತಿ ನೀಡಿದ್ದೇವೆ ಇನ್ನು 15 ಅರ್ಜಿಗಳಿಗೆ ಅನುಮೋದನೆ ನೀಡಲಾಗುವುದು ಎಂದರು.

ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ನಡೆಸಬೇಕು ಎಂದು ತಿಳಿಸಿದರು ಸಭೆಯಲ್ಲಿ ಶಿವನಂಜಯ್ಯ , ಅಮರ್ ಬಾಬು, ಮನೋಜ್ ಕುಮಾರ್, ಶಿವು,ಪ್ರಸನ್ನ, ರಮೇಶ್, ಸುರೇಶ್ ಇತರೆ ಮುಖಂಡರುಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

Trending

Exit mobile version