ದಿನದ ಸುದ್ದಿ

ಯೋಧ ಗುರು ಕುಟುಂಬಕ್ಕೆ ಆಸರೆ: ಭಾವುಕರಾದ ಮಂಡ್ಯ ಜನತೆ

Published

on

ಸುದ್ದಿದಿನ ಡೆಸ್ಕ್ : ಮಂಡ್ಯ ಜಿಲ್ಲೆ ಇಂದು ವಿಶೇಷ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡ್ಯಕ್ಕೆ ಬಂದು ಅನೇಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು ಈ ಸಾಲಿನಲ್ಲಿ ರೈತರಿಗೆ ಸಾಲಮನ್ನಾ- ಋಣಮುಕ್ತ ಪಾತ್ರ ವಿತರಿಣೆ ಕಾರ್ಯಕ್ರಮವೂ ಇತ್ತು. ಆಗ ಕಂಡದ್ದು ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧ ಹೆಚ್ ಗುರು ಅವರ ಪತ್ನಿ.

ತಕ್ಷಣವೇ ಅವರನ್ನು ವೇದಿಕೆಗೆ ಬರಮಾಡಿಕೊಂಡ ಮುಖ್ಯಮಂತ್ರಿಗಳು ಯೋಧ ಗುರು ಪತ್ನಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನು ಕೊಟ್ಟರು. ಇದನ್ನು ಕೇಳಿ ಗುರು ಅವರ ಪತ್ನಿ ಸಂತೋಷದಿಂದ ಕಣ್ಣೀರಿಟ್ಟರು. ಇಡೀ ಸಭೆ ಅವರ ಜೊತೆ ಮೂಕವಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version