ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಶ್ರಮಿಕ ಶಕ್ತಿಯಿಂದ ಮೇ ದಿನ ಆಚರಣೆ

Published

on

ಸುದ್ದಿದಿನ,ದಾವಣಗೆರೆ : ಈ ಕೆಂಪು ಬಾವುಟ ಯಾವುದೇ ಶೋಕಿಗಾಗಿ ಹುಟ್ಟಿದಲ್ಲ ಇದು ಶ್ರಮಿಕರ ಉದ್ಧಾರಕ್ಕಾಗಿ ಹುಟ್ಟಿದ್ದು ಎಂದು ಆವರಗೆರೆ ಉಮೇಶ್ ಅವರು ಹೇಳಿದರು.

ಜಿಲ್ಲೆಯ ಕರ್ನಾಟಕ ಶ್ರಮಿಕ ಶಕ್ತಿ ಯಿಂದ ಇಂದು ಮೇ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತಾಡಿದ ಅವರು, ದೇಶದ 90%ರಷ್ಟು ಶ್ರಮಿಕವರ್ಗ ಇದೆ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ನೀವು ಮನಸ್ಸು ಮಾಡಿದರೆ ದೇಶವನ್ನು ಸರಿಯಾದ ರೀತಿಯಲ್ಲಿ ನಡೆಸಬಹುದು.1986 ರಲ್ಲಿ ಲಕ್ಷಾಂತರ ಕಾರ್ಮಿಕರ ಪ್ರಾಣ ತ್ಯಾಗದಿಂದ ಹುಟ್ಟಿದ ದಿನ ಮೇದಿನ ವಾಗಿದೆ ಎಂದರು.

ಚುನಾವಣೆಯಲ್ಲಿ ನಿಮ್ಮ ಜವಾಬ್ದಾರಿ ಯನ್ನು ಹೊತ್ತು ಒಳ್ಳೆಯ ಸರ್ಕಾರವನ್ನು ರಚಿಸಬೇಕು. ಜನಪ್ರತಿನಿಧಿಗಳು ಎನ್ನಿಸಿಕೊಂಡವರ ಬೇಜವಾಬ್ದಾರಿ ತನದಿಂದ ಬಡವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಸಂಘಟನೆಯ ಸಂಪರ್ಕದಲ್ಲಿರಬೇಕು ಮತ್ತು ಸಂಘಟನೆ ಜೊತೆ ನೀವು ಗಟ್ಟಿಯಾಗಿ ನಿಲ್ಲಬೇಕು, ಸಂಘಟನೆ ಹೋರಾಟವೇ ಕಾರ್ಮಿಕರಿಗೆ ಜೀವಾಳವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು

ಕಾರ್ಯಕ್ರಮದಲ್ಲಿ ಹಿರಿಯ ಅಸಂಘಟಿತ ಕಾರ್ಮಿಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಹಾಗೆ ಟೈಲ್ ಮತ್ತು ಮನೆಕೆಲಸ ಕಾರ್ಮಿಕರಿಗೆ ಗುರುತಿನ ಚೀಟಿ ಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆದೀಲ್ ಖಾನ್, ಪವಿತ್ರ ಅಶ್ಫಕ್, ಸತೀಶ್ ಅರವಿಂದ್, ಅಣ್ಣಪ್ಪ, ಏಜಾಜ್, ಹಳದಪ್ಪ, ಫರಾನ್, ಗಿರಿಯಪ್ಪ, ಸುಶೀಲಮ್ಮ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version