ರಾಜಕೀಯ

ಚುನಾವಣಾ ಪ್ರಚಾರಕ್ಕೆ ಸೇನಾ ಫೋಟೋ ಬಳಸುವಂತಿಲ್ಲ : ಚುನಾವಣಾ ಆಯೋಗ ಖಡಕ್​ ವಾರ್ನಿಂಗ್​

Published

on

ಸುದ್ದಿದಿನ,ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಲೋಕ ಸಮರಕ್ಕೆ ದಿನ ನಿಗದಿ ಮಾಡುವ ತಯಾರಿಯಲ್ಲಿದೆ. ಆದ್ರೆ, ಇತ್ತ ರಾಜಕೀಯ ಪಕ್ಷಗಳು ಯೋಧರ ಫೋಟೋ ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿವೆ. ಇದಕ್ಕೆ ಬ್ರೇಕ್​​ ಹಾಕಲೆಂದೇ ಆಯೋಗ ರಾಜಕೀಯ ಪಕ್ಷಗಳಿಗೆ ಖಡಕ್​ ಆಗಿ ವಾರ್ನ್ ಮಾಡಿದೆ.

‘ತಮ್ಮ ಕಾಲದಲ್ಲಿ ಏರ್​ಸ್ಟ್ರೈಕ್​ ನಡೆಸಿ ಉಗ್ರರನ್ನು ಮಟ್ಟ ಹಾಕಿದ್ದೇವೆ’ ಅಂತಾ ಬಿಜೆಪಿ ಎಲೆಕ್ಷನ್​ಗಳಲ್ಲಿ ಬೊಬ್ಬೆ ಹೊಡಿತಿದ್ರೆ, ವಿಪಕ್ಷಗಳು ಇದಕ್ಕೆ ಸಾಕ್ಷಿ ನೀಡುವಂತೆ ಪ್ರಧಾನಿ ಮೋದಿ ಮೇಲೆ ಮುಗಿ ಬೀಳುತ್ತಿವೆ. ಇದೇ ವೇಳೆ, ಇದರ ಸಾಧಕ ಬಾಧಕಗಳನ್ನು, ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಬ್ರೇಕ್​ ಹಾಕಲು ಮುಂದಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಆಯೋಗ, ಯಾವುದೇ ಪಕ್ಷಗಳು ಯೋಧರ ಫೋಟೋ ಅಥವಾ ಸೇನೆಯ ಕಾರ್ಯಚಟುವಟಿಕೆಳನ್ನು ತಮ್ಮ ಬ್ಯಾನರ್​ ಅಥವಾ ಪ್ರಚಾರ ವೇದಿಕೆಗಳಲ್ಲಿ ಬಳಸಿಕೊಳ್ಳುವಂತಿಲ್ಲ ಅಂತಾ ಖಡಕ್​ ವಾರ್ನ್​ ಮಾಡಿದೆ.

ಪಾಕಿಸ್ತಾನ ಸೆರೆಯಿಂದ ಬಿಡುಗಡೆ ಹೊಂದಿ ತಾಯ್ನೆಲೆಕ್ಕೆ ವಾಪಸ್ಸಾದ ವಿಂಗ್ ಕಮಾಂಡರ್​ ಅಭಿನಂದನ್​ನ ಫೋಟೋವನ್ನು ದೆಹಲಿ ಬಿಜೆಪಿ ಈಗಾಗಲೇ ತಮ್ಮ ಪ್ರಚಾರದ ಬ್ಯಾನರ್​​ಗಳಲ್ಲಿ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಸೋಷಿಯಲ್​​ ಮೀಡಿಯಾಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್‌ ಕೂಡ ಆಯೋಗಕ್ಕೆ ದೂರು ನೀಡಿದ್ರು. ಇದನ್ನ ಗಂಭೀರವಾಗಿ ಪರಿಗಣಿಸಿದ ಆಯೋಗ, ರಾಜಕೀಯ ಪಕ್ಷಗಳನ್ನ ಹದ್ದುಬಸ್ತಿನಲ್ಲಿಡಲು ಈ ಸುತ್ತೋಲೆ ಹೊರಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version