ರಾಜಕೀಯ

ಬರೆದಿಟ್ಟುಕೊಳ್ಳಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತೆ : ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಎಚ್.ಡಿ.ರೇವಣ್ಣ

Published

on

ಸುದ್ದಿದಿನ, ಕಲಬುರಗಿ : ಆರು ತಿಂಗಳಿನಿಂದ ಸರ್ಕಾರ ಕೆಡತಿವಿ ಅಂತಾ ಬಿಜೆಪಿಯವರು ಹೇಳ್ತಾನೆ ಬರ್ತಿದಾರೆ, ರಾಜ್ಯದ ಹಿತ ಬಿಟ್ಟು ಅಧಿಕಾರಕ್ಕಾಗಿ ಅವರು ಒದ್ದಾಡುತ್ತಿದ್ದಾರೆ ಕಲಬುರಗಿಯಲ್ಲಿ ಸಚಿವ ಎಚ್‌ಡಿ ರೇವಣ್ಣ ಸುದ್ಧಿಗೋಷ್ಟಿಯಲ್ಲಿ ಕಿಡಿಕಾರಿದರು.

ನಂತರ ಮಾತನಾಡಿದ ಅವರು ಬರ ಪರಿಹಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಆದ್ರೆ ರಾಜ್ಯ ಬಿಜೆಪಿಯವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ನಾಚಿಕೆಯಾಗಬೇಕು. ನಾವು ಅಣ್ಣ ತಮ್ಮಾ ಜಗಳ ಮಾಡ್ತೇವೆ ಅನ್ನೊದು ಬಿಜೆಪಿಯವರ ಭ್ರಮೆ. ಆದರೆ ಎಂಟನೇ ತಾರಿಖಿಗೆ ಬಜೆಟ್ ಮಾಡೇ ಮಾಡ್ತೇವೆ.ಈ ಬಾರಿ ಬಜೆಟ್ ರೈತರ ಪರ ಆಗಿರಲಿದೆ ಎಂದು ಹೇಳಿದರು

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಮೈತ್ರಿ ಮಾಡ್ತೇವೆ ಅಂದ್ರೆ ಸಂತೋಷ, ಇಲ್ಲಾಂದ್ರೆ ಮುಂದೆನಾಗುತ್ತೊ ನೋಡೊಣ. ಬರೆದಿಟ್ಟುಕೊಳ್ಳಿ ಈ ಸರ್ಕಾರ ಐದು ವರ್ಷ ಖಂಡಿತಾ ಇರುತ್ತೆ.ಯಡಿಯೂರಪ್ಪರಿಂದ ಸರ್ಕಾರ ಕೆಡವೊಕೆ ಆಗಲ್ಲ ಅಂತಾ ಸುಮ್ಮನ್ನಿದ್ದಾರೆ.ಹೀಗಾಗಿ ಆರ್ ಅಶೋಕ್‌ರನ್ನ ಸರ್ಕಾರ ಕೆಡವೊಕೆ ಮುಂದೆ ಮಾಡಿದ್ದಾರೆ.ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಬೇಕು.
ಬಡವರ ಮಕ್ಕಳು ಇಂಗ್ಲಿಷ್ ಓದಬೇಕು, ಶ್ರೀಮಂತರ ಮಕ್ಕಳು ಮಾತ್ರ ಇಂಗ್ಲಿಷ್ ಕಲಿಬೇಕಾ? ಎಂದು ಖಡಕ್ ಆಗಿ ನುಡಿದರು.

ನಾನು ಅಪ್ಪಟ್ಟ ಶಿವನ ಭಕ್ತ, ಜೊತೆಗೆ ಇಂದು ಸೋಮುವಾರ‌ ನಿಮ್ಮಿತ್ತ ಟೆಂಪಲ್ ರನ್ ಮಾಡಿದಿನಿ. ಸೋಮುವಾರ ದೇವರಿಗೆ ಕೈ ಮುಗಿಬಾರದಂತಾ ಏನಾದರು ಇದೆಯಾ? ರಾಜ್ಯದ ಜನತೆಗೆ ಹಾಗೂ ಬರದಿಂದ ತತ್ತರಿಸಿರುವ ರೈತರಿಗೆ ಒಳ್ಳೆದಾಗಲಿ ಅಂತಾ ಪ್ರಾರ್ಥಿಸಿದಿನಿ. ಯಾರೇ ಏನೇ ಮಾಡಲಿ ಸರ್ಕಾರಕ್ಕೆನು ಆಗಲ್ಲ ಕಣ್ರಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version