ರಾಜಕೀಯ
ಖಾತೆ ಬದಲಿಸದಿದ್ದರೆ ರಾಜೀನಾಮೆ ಕೊಡುವೆ : ಕಾಂಗ್ರೆಸ್ ಸಚಿವ ವೆಂಕಟರಮಣಪ್ಪ
ಸುದ್ದಿದಿನ ಡೆಸ್ಕ್ : ಸಮ್ಮಿಶ್ರ ಸರಕಾರಕ್ಕೆ ಮತ್ತೆ ರಾಜೀನಾಮೆ ಸಂಕಟ ಶುರುವಾಗಿದ್ದು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಕಾರ್ಮಿಕ ಸಚಿವ ವೆಂಕಟರಮಣಪ್ಪ.
ಇಲಾಖೆಯ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಸಹಕಾರ ಆರೋಪ ವ್ಯಕ್ತಪಡಿಸಿದ್ದು ಅನುದಾನ ಬಿಡುಗಡೆ, ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿಕೆಯಲ್ಲಿ ಅಧಿಕಾರಿಗಳ ಸಹಕಾರ ಇಲ್ಲ. ಈ ಹಿನ್ನೆಲೆಯಲ್ಲಿ ಖಾತೆಯನ್ನು ಬದಲಿಸಿಕೊಡುವಂತೆ ಮನವಿಮಾಡಿದ್ದಾರೆ. ಖಾತೆ ಬದಲಿಸಿಕೊಡದಿದ್ದರೆ ರಾಜೀನಾಮೆ ಬೆದರಿಕೆ ಒಡ್ಡಿದ್ದಾರೆ ಸಚಿವ ವೆಂಕಟರಮಣಪ್ಪ.
ಸುದ್ದಿದಿನ.ಕಾಂ|ವಾಟ್ಸಾಪ್|9986715401