ರಾಜಕೀಯ

ಹೊನ್ನಾಳಿಯಲ್ಲಿ ಗರಿಗೆದರಿದ ಕಿಟ್ ರಾಜಕೀಯ; ದಾವಣಗೆರೆಯಲ್ಲಿಂದು ಸಿದ್ಧವಾಗಿದೆ ಅಖಾಡ..!

Published

on

ಸುದ್ದಿದಿನ, ದಾವಣಗೆರೆ: ಇಡೀ ಜಗತ್ತು ಕೊರೋನಾ ಸಂಕಟದಿಂದ ನಲುಗುತ್ತಿದೆ. ಆದರೆ ಇತ್ತ ಹೊನ್ನಾಳಿಯಲ್ಲಿ ಮಾತ್ರ ಕಿಟ್ ರಾಜಕೀಯ ಗಾಳಿ ಮಾತ್ರ ಜೋರಾಗಿದೆ. ಬಡಜನರಿಗೆ ಆಹಾರದ ಕಿಟ್ ವಿತರಣೆ ಮಾಡುವ ವಿಚಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಜಿ.ಶಾಂತನಗೌಡ ಅವರ ನಡುವೆ ಬಿಗ್ ಫೈಟ್ ಆರಂಭವಾಗಿದೆ.

ಹೌದು, ಆಹಾರದ ಕಿಟ್ ವಿಚಾರದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸುಳ್ಳು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಜಿ.ಶಾಂತನಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಷ್ಟದಲ್ಲಿರುವ ಜನರಿಗೆ 15 ಸಾವಿರಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ ಮಾಡಿದ್ದೇನೆ ಎಂದು ರೇಣುಕಾಚಾರ್ಯ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಶಾಂತಗೌಡ ಅವರು ಅದರ ರಿಯಾಲಿಟಿ ಚೆಕ್ ಕೂಡ ನಡೆಸಿದ್ದಾರೆ. ಈ ಕುರಿತು ಉಭಯ ನಾಯಕರ ನಡುವೆ ಮೊಬೈಲ್ ಮೂಲಕ ಸಣ್ಣ ಟಾಕ್ ವಾರ್ ಕೂಡ ನಡೆದಿದ್ದು, ಪ್ರಕರಣ ಇಂದು ಪತ್ರಿಕಾಗೋಷ್ಠಿಗೆ ಶಿಫ್ಟ್ ಆಗಿದೆ. ಸದ್ಯ ವಿಚಾರ ಸೋಮವಾರ ಟಿವಿ ಮಾಧ್ಯಗಳಿಗೆ ಆಹಾರವಾಗಿತ್ತು.

ರೇಣು ಪ್ರಚಾರದ ಗಿಮಿಕ್

ಕರೋನಾ ಸಂದರ್ಭದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಪ್ರಚಾರದ ಗಿಮಿಕ್ ಆರಂಭಿಸಿದ್ದಾರೆ ಎಂಬ ಆರೋಪಗಳು ಸಣ್ಣದಾಗಿ ಕೇಳಿ ಬರುತ್ತಿವೆ. ಆದರೆ ರೇಣುಕಾರ್ಯ ಅವರು ಇದನ್ನು ಖಡಖಂಡಿತವಾಗಿ ತಳ್ಳಿ ಹಾಕಿದ್ದಾರೆ. ನಾನು ಪ್ರತಿ ಹಳ್ಳಿಗಳಿಗೂ ತೆರಳಿ ಸಂಕಷ್ಟದಲ್ಲಿರುವ ಜನರಿಗೆ ಜಾಗೃತಿ ಮೂಡಿಸುವ ಕೆಲ ಮಾಡುತ್ತಿದ್ದೇನೆ ಎಂದು ವಿವಿಧ ಸಂದರ್ಭಗಳಲ್ಲಿ ಹೇಳಿಕೊಂಡು ಬಂದಿದ್ದಾರೆ. ಸದ್ಯ ಈ ಕುರಿತ ಪರ ವಿರೋಧ ಚರ್ಚೆಗಳು ಮಾತ್ರ ಹೊನ್ನಾಳಿ ಕ್ಷೇತ್ರದಲ್ಲಿ ಹಸಿಯಾಗಿವೆ.

ವಾರ್ ಆರಂಭವಾಗಿದ್ದು ಹೇಗೆ ?

ಶಾಸಕ ಎಂ.ಪಿ.ರೇಣುಚಾರ್ಯ ಅವರು 15 ಸಾವಿರ ಆಹಾರದ ಕಿಟ್ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಸ್ವತಃ ರೇಣುಕಾಚಾರ್ಯ ಅವರಿಗೆ ಕರೆ ಮಾಡಿದ ಮಾಜಿ ಶಾಸಕ ಜಿ.ಶಾಂತನಗೌಡ ಅವರು ಈ ಕುರಿತು ಪ್ರಶ್ನೆ ಮಾಡಿದ್ದರು. ಆಗ ಆಹಾರದ ಕಿಟ್ ವಿತರಣೆ ಮಾಡಿರುವ ಕುರಿತು ನಾನು ಲೆಕ್ಕ ಕೊಡುವ ಬಲ್ಲೆ ಎಂಬರ್ಥದಲ್ಲಿ ರೇಣುಕಾಚಾರ್ಯ ಹೇಳಿದ್ದರು. ನಂತರ ಶಾಸಕ ಜಿ.ಶಾಂತನಗೌಡ ಅವರು ತಾಲೂಕು ಕಚೇರಿಗೆ ತೆರಳಿ ರೇಣುಕಾಚಾರ್ಯ ಅವರಿಗೆ ಮೊಬೈಲ್ ಕರೆ ಮಾಡಿ ಆಕ್ಷೇಪ ವ್ಯಕ್ತಪಪಡಿಸಿದ್ದಾರೆ. ನಂತರ ರೇಣುಕಾಚಾರ್ಯ ಕೂಡ ಶಾಂತನಗೌಡ ಅವರಿಗೆ ತಿರುಗೇಟು ನೀಡಿದ್ದಾರೆ. ಸದ್ಯ ಇಡೀ ಪ್ರಕರಣ ಇಂದಿನ ಪತ್ರಿಕಾಗೋಷ್ಠಿವರೆಗೆ ಬಂದು ನಿಂತಿದೆ. ದಾವಣಗೆರೆಯಲ್ಲಿ ಮಂಗಳವಾರ ಉಭಯ ನಾಯಕರು ಈ ವಿಚಾರವಾಗಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version