ಲೈಫ್ ಸ್ಟೈಲ್

ಸಾಧಕ ದಂಪತಿಗಳಿಗೆ ಅಭಿನಂದನೆ

Published

on

  • ಗಂಗಾಧರ್ ಬಿ ಎಲ್ ನಿಟ್ಟೂರ್

ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಬೆಳಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ದಿನಾಂಕ : 21.06.2022 ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮೋದಿಕೇರ್ ಸಕ್ಸಸ್ ಚಾಂಪಿಯನ್ಸ್ ತಂಡದ ವತಿಯಿಂದ ಕರ್ನಾಟಕ ಮೋದಿಕೇರ್ ಇತಿಹಾಸದಲ್ಲಿ ಕೇವಲ 365 ದಿನಗಳಲ್ಲಿ ಅದ್ಭುತ ಯಶಸ್ಸಿನ ಪಯಣದೊಂದಿಗೆ ಪ್ಲಾಟಿನಮ್ ಡೈರೆಕ್ಟರ್ ಆಗಿ ಹೊರ ಹೊಮ್ಮುವ ಮೂಲಕ ಮಾದರಿ ಸಾಧಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬೆಳಲಗೆರೆ ಗ್ರಾಮದ ದೊಡ್ಡೇಶ್ ಹಾಗೂ ಕವಿತಾ ದಂಪತಿಗಳಿಗೆ ಅದ್ದೂರಿ ಕಾರು ಅರ್ಪಣೆ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ವಿಶೇಷ ಅತಿಥಿಗಳಾಗಿ ಆಗಮಿಸಲಿರುವ ಯಶಸ್ವಿ ಚಾಂಪಿಯನ್ಸ್ ಸಂಸ್ಥಾಪಕ, ಕಿರಿಯ ಮಿಲಿಯನೇರ್ ಓ. ಎಸ್ . ಚಂದ್ರಹಾಸ್, ಡೈಮಂಡ್ ಡೈರೆಕ್ಟರ್ ಗಳಾದ ಓಂಕಾರಮೂರ್ತಿ ಎಸ್.ಎಸ್, ಶ್ರೀಮತಿ ನಂದಾ ಬಿ ಜೆ , ನಟರಾಜ್ ಡಿ ಬಿ ಮತ್ತು ಶ್ರೀಮತಿ ಶೋಭಾ ಜೆ ಇವರ ಸಮ್ಮುಖದಲ್ಲಿ ಮೆರವಣಿಗೆಯೊಂದಿಗೆ ದೊಡ್ಡೇಶ್ ದಂಪತಿಗಳಿಗೆ ಹೊಸ ಕಾರು ಅರ್ಪಿಸಿ ಅಭಿನಂದಿಸಲಾಗುತ್ತಿದೆ .

ಅತಿ ಕಡುಬಡತನದ ಕುಟುಂಬಕ್ಕೆ ಸೇರಿದ ಬೆಳಲಗೆರೆ ಗ್ರಾಮದ ದೊಡ್ಡೇಶ್ ಅವರು ಎಂ.ಎ, ಬಿ.ಇಡಿ ಪದವೀಧರರು. ಜೀವನೋಪಾಯಕ್ಕಾಗಿ ಈ ಹಿಂದೆ ಮೆಡಿಕಲ್ ಶಾಪ್ ಹಾಗೂ ಗಾರ್ಮೆಂಟ್ ಕೆಲಸ ಮಾಡಿ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದ ಅವರಿಗೆ ಪತ್ನಿ ಕವಿತಾ ಟೈಲರಿಂಗ್ ಮೂಲಕ ಕುಟುಂಬ ನಿರ್ವಹಣೆಗೆ ಸಹಕರಿಸುತ್ತಿದ್ದರು. ನಿರಂತರ ಆರ್ಥಿಕ ಏಳುಬೀಳು ನಡುವೆ ಮನ ನೊಂದು ಖಾಸಗಿ ನೌಕರಿಗೆ ಗುಡ್ ಬೈ ಹೇಳಿದ ದೊಡ್ಡೇಶ್ ಕಳೆದ ವರ್ಷ ಪತ್ನಿ ಸಮೇತ ಮೋದಿಕೇರ್ ಬಿಜಿನೆಸ್ ಗೆ ಇಳಿದಿದ್ದರು.

ಅತಿ ಕಡಿಮೆ ಅವಧಿಯಲ್ಲಿ ಪ್ಲಾಟಿನಮ್ ಡೈರೆಕ್ಟರ್ ಹಂತ ತಲುಪಿ ” ಮೋದಿ ಕೇರ್ ಕರ್ನಾಟಕದ ಸಿಂಹ ” ಎಂಬ ಅಭಿದಾನದೊಂದಿಗೆ ಕಾರ್ ಅಚಿವರ್ ಆಗಿರುವ ಇವರ ಅವಿರತ ಪರಿಶ್ರಮದ ಫಲ ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಸಾಕ್ಷಿಯಾಗಿದೆ. ತಾವು ಓದಿದ ವಿದ್ಯಾಭಾಸದ ಅಂಕಪಟ್ಟಿ ಹಿಡಿದು ನೌಕರಿಗಾಗಿಯೇ ಕಾದು ಕುಳಿತುಕೊಳ್ಳುವ ನಿರುದ್ಯೋಗಿಗಳಿಗೆ ಇವರ ಸಾಧನೆ ಪ್ರೇರಣಾದಾಯಕ ಯಶೋಗಾಥೆಯಾಗಿದೆ.

(- ಗಂಗಾಧರ್ ಬಿ ಎಲ್ ನಿಟ್ಟೂರ್
ಮೊ ಸಂ : 8867702396)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version