ದಿನದ ಸುದ್ದಿ
ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಲಕ್ಷಲಕ್ಷ ಹಣ ಲೂಟಿ : ಕಾರ್ಖಾನೆಗಳ ನಿಜ ಬಣ್ಣ ಬಯಲು ಮಾಡಿದ ಆರ್ ಟಿ ಐ ಕಾರ್ಯಕರ್ತ
ಸುದ್ದಿದಿನ, ಬೆಳಗಾವಿ : ರಾಜ್ಯದ ಸಕ್ಕರೆಯ ಕಾರ್ಖಾನೆ ಗಳಿಂದ ಹಣ ಲೂಟಿಯಾಗಿದೆ ಹಾಗೇ ಕೇವಲ ಕಾರ್ಖಾನೆಗಳಿಂದ ಮಾತ್ರವಲ್ಲ ಸರಕಾರ ದಿಂದಲೂ ಹಣಲೂಟಿಯಾಗಿದೆ ಎಂದು ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಾಡಾದ ಅವರು ಕಾರ್ಖಾನೆಗಳ ನಿಜ ಬಣ್ಣ ಬಯಲು ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆ ಗಳು ರೋಗಗ್ರಸ್ತ ವಾಗಿವೆ.
ಅವುಗಳ ನಿರ್ವಣೆ ಮಾಡಲು ಆಗುತ್ತಿಲ್ಲ ಎಂಬ ನೆಪ ನೀಡಿ ಸರಕಾರದಿಂದ ಹಣಕಾಸು ನೆರವು ಪಡೆದಿವೆ ಕಾರ್ಖಾನೆಗಳು. ಒಟ್ಟು 29752.38 ಲಕ್ಷ ಹಣ ಪಡೆದಿವೆ ಕಾರ್ಖಾನೆಗಳು. ಹೀಗೆ ಆರ್ಥೀಕ ಸಹಾಯ ಪಡೆದು ಕೂಡ ರೈತರ ಹಣ ನೀಡದ ಕಾರ್ಖಾನೆಗಳ ಮಾಲೀಕರು ಮೋಜು ಮಸ್ಥಿಯಲ್ಲಿದ್ದಾರೆ. ಇದರ ವಿರುದ್ದ ಸಿ ಓಡಿ ತನಿಕೆ ಆಗಬೇಕು ಎಂದು ಭೀಮಪ್ಪ ಒತ್ತಾಯಿಸಿದ್ದಾರೆ.
ಸುದ್ದಿದಿನ.ಕಾಂ.ವಾಟ್ಸಾಪ್|9986715401