ದಿನದ ಸುದ್ದಿ
ಲೋಕಸಭಾ ಚುನಾವಣೆ ; ಮತ ಎಣಿಕೆ | ಯಾರಿಗೆ ? ಎಷ್ಟು ಮತ : ಇಲ್ಲಿದೆ ಸಂಪೂರ್ಣ ಮಾಹಿತಿ
ಸುದ್ದಿದಿನ ಡೆಸ್ಕ್ : ಲೋಕಸಭೆಯ 543 ಸ್ಥಾನಗಳ ಪೈಕಿ ಒಂದು ಸ್ಥಾನದಲ್ಲಿ ಬಿಜೆಪಿ ಜಯ ಗಳಿಸಿದೆ. ಉಳಿದ 542 ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ.
ಬಿಜೆಪಿ-233, ಐಎನ್ಸಿ-94, ಎಸ್ಪಿ-35, ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್-ಎಐಟಿಸಿ-24, ಡಿಎಂಕೆ-19, ತೆಲುಗುದೇಶಂ-ಟಿಡಿಪಿ-15, ಜೆಡಿಯು-13, ಶಿವಸೇನಾ ಉದ್ಧವ್ ಬಾಳೆ ಸಾಹೇಬ್ಠಾಕ್ರೆ-ಎಸ್ಎಚ್ಎಸ್ಯುಬಿಟಿ-10, ಶಿವಸೇನೆ ಶಿಂಥೆ ಬಣ-6, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ಶರದ್ ಪವರ್-8, ಆಮ್ ಆದ್ಮಿ ಪಾರ್ಟಿ-4, ರಾಷ್ಟ್ರೀಯ ಜನತಾದಲ್-4, ಜನತಾದಳ್ ಜೆಡಿಎಸ್-3 ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್-ಇಯುಎಂಎಲ್-3 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.
ಗುಜರಾತ್-ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ, ಬಿಜೆಪಿ-2,09,736ಸೋನಾಲ್ ಪಟೇಲ್, ಕಾಂಗ್ರೆಸ್-42,642
ಉತ್ತರ ಪ್ರದೇಶ, ಲಕ್ನೋ ರಾಜನಾಥ್ ಸಿಂಗ್-62,210
ರವಿದಾಸ್ ಮೆಹ್ರೋತ್ರಾ- 55,941ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್-81,407
ದಿನೇಶ ಪ್ರತಾಪ್ ಸಿಂಗ್, ಬಿಜೆಪಿ-42,069
ಕೇರಳ, ವಯಾನಾಡು ರಾಹುಲ್ ಗಾಂಧಿ-1,32,553
ಅಣ್ಣೆರಾಜ, ಸಿಪಿಐ-52,350 ತೆಲಂಗಾಣ, ಹೈದರಾಬಾದ್, ಅಸ್ಸಾಸುದ್ದೀನ್ ಓವೈನಿ-1,28,693 ಮತಗಳನ್ನು ಪಡೆದ್ದಾರೆ.
ಮಾಧವಿ ಲತಾ-95,684
ಉತ್ತರ ಪ್ರದೇಶ, ಅಮೇಥಿ ಕಿಶೋರಿ ಲಾಲ್, ಕಾಂಗ್ರೆಸ್-70,252ಸ್ಮೃತಿ ಇರಾನಿ, ಬಿಜೆಪಿ-50,995
ಹಿಮಾಚಲ ಪ್ರದೇಶ- ಮಂಡಿ ಕಂಗನಾ ರನೌತ್, ಬಿಜೆಪಿ-2,25,654ವಿಕ್ರಮಾದಿತ್ಯ ಸಿಂಗ್-ಕಾAಗ್ರೆಸ್-1,94,562
ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ-ಬಿಜೆಪಿ 17 ಕ್ಷೇತ್ರಗಳಲ್ಲಿ, ಜೆಡಿಎಸ್ 3, ಹಾಗೂ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ನ ಮೃಣಾಲ್ ಹೆಬ್ಬಾಳ್ಕರ್ ಅವರಿಗಿಂತ 39 ಸಾವಿರದ 738 ಮಗಳಿಂದ ಮುಂದಿದ್ದಾರೆ. ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷದ 54 ಸಾವಿರದ 506 ಮತಗಳಿಂದ ಪಡೆದಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ್ ಅವರು, ಕಾಂಗ್ರೆಸ್ನ ಸಂಯುಕ್ತ ಶಿವಾನಂದ ಪಾಟೀಲ್ ಅವರಿಗಿಂತ ಸುಮಾರು 10 ಸಾವಿರ ಮತಗಳಿಂದ ಮುಂದಿದ್ದಾರೆ.
ಹಾವೇರಿಯಲ್ಲಿ ಬಿಜೆಪಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ನ ಆನಂದ ಸ್ವಾಮಿ ಗಡ್ಡದೇವರ ಮಠ ಅವರಿಗಿಂತ 15 ಸಾವಿರ ಮತಗಳ ಮೇಲುಗೈ ಸಾಧಿಸಿದ್ದಾರೆ.
ಧಾರವಾಡದಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ 42 ಲಕ್ಷದ 50 ಸಾವಿರದ 618 ಮತಗಳಿಸಿದ್ದು, ಕಾಂಗ್ರೆಸ್ನ ವಿನೋದ್ ಆಸೂಟಿ ಅವರಿಗಿಂತ 42 ಸಾವಿರದ 430 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾಂಗ್ರೆಸ್ ಅಂಜಲಿ ನಿಬಾಳ್ಕರ್ ಅವರಿಗಿಂತ ಒಂದು ಲಕ್ಷದ 21 ಸಾವಿರದ 140 ಮತಗಳಿಂದ ಮುಂದಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2 ಲಕ್ಷದ 44 ಸಾವಿರದ 788 ಮತ ಪಡೆದಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ್ ಹಾಗೂ ಕಾಂಗ್ರೆಸ್ ಪ್ರಭಾ ಮಲ್ಲಿಕಾರ್ಜುನ ಅವರ ನಡುವೆ ತೀವ್ರ ಪೈಪೋಟಿ ನಡೆದಿದೆ. ಪ್ರಭಾ ಮಲ್ಲಿಕಾರ್ಜುನ ಒಂದು ಲಕ್ಷದ 7 ಸಾವಿರದ 481 ಹಾಗೂ ಗಾಯತ್ರಿ ಅವರು ಒಂದು ಲಕ್ಷದ 4 ಸಾವಿರದ 61 ಮತಗಳಿಸಿದ್ದಾರೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಬ್ರಿಜೇಶ್ಚೌಟಾ 1 ಲಕ್ಷದ 93 ಸಾವಿರದ 707 ಮತಗಳಿಸಿ ಮುನ್ನಡೆಯಲಿದ್ದಾರೆ. ಕಾಂಗ್ರೆಸ್ನ ಪದ್ಮರಾಜ್ ಪೂಜಾರಿ 1 ಲಕ್ಷದ 58 ಸಾವಿರದ 824 ಮತಗಳಿಸಿದ್ದಾರೆ.
ಚಿತ್ರದುರ್ಗ ಕ್ಷೇತ್ರ ಬಿಜೆಪಿಯ ಗೊವಿಂದ ಕಾರಜೋಳ- 3 ಲಕ್ಷದ 40 ಸಾವಿರದ 746 ಮತಗಳಿಸಿದ್ದಾರೆ. ಕಾಂಗ್ರೆಸ್ 135 ಚಂದ್ರಪ್ಪ 3 ಲಕ್ಷದ 2 ಸಾವಿರದ 60 ಮತಗಳಿಸಿದ್ದಾರೆ.
ತುಮಕೂರು; ಬಿಜೆಪಿ ವಿ.ಸೋಮಣ್ಣ-2,32 ಸಾವಿರದ 428 ಮತ್ತು ಕಾಂಗ್ರೆಸ್-ಮುದ್ದ ಹನುಮಗೌಡ-1 ಲಕ್ಷದ 74 ಸಾವಿರದ 108 ಮತ
ಮಂಡ್ಯ: ಜೆಡಿಎಸ್ ಜೆಡಿಎಸ್-ಎಚ್.ಡಿ.ಕುಮಾರಸ್ವಾಮಿ-3 ಲಕ್ಷದ 38 ಸಾವಿರದ 13 ಮತಗಳಿಸಿದ್ದಾರೆ.
ಕಾಂಗ್ರೆಸ್ನ-ವೆAಕಟರಮಣೇಗೌಡ- 2 ಲಕ್ಷದ 3 ಸಾವಿರದ 580 ಮತಗಳಿಸಿದ್ದಾರೆ. ಜೆಡಿಎಸ್-1 ಲಕ್ಷದ 34 ಸಾವಿರದ 433 ಮತಗಳ ಮುನ್ನಡೆ ಪಡೆದಿದೆ.
ಮೈಸೂರು- ಬಿಜೆಪಿಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 3 ಲಕ್ಷದ 4 ಸಾವಿರದ 365 ಮತಗಳಿಸಿದ್ದಾರೆ. ಕಾಂಗ್ರೆಸ್ನ ಎಂ.ಲಕ್ಷ್ಮಣ್ 2 ಲಕ್ಷದ 41 ಸಾವಿರದ 399 ಮತಗಳಿಸಿದ್ದಾರೆ.
ಇತ್ತೀಚಿನ ವರದಿ ಪ್ರಕಾರ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 2 ಲಕ್ಷದ 44 ಸಾವಿರದ 98 ಮತಗಳ ಮುನ್ನಡೆಯಲಿದೆ. ಕಾಂಗ್ರೆಸ್ನ ಗೀತಾ ಶಿವಕುಮಾರ್ 1 ಲಕ್ಷದ 70 ಸಾವಿರದ 102 ಮತಗಳಿಸಿದ್ದಾರೆ.
ಪಕ್ಷೇತರ ಕೆ.ಎಸ್.ಈಶ್ವರಪ್ಪ 9 ಸಾವಿರದ 557 ಮತಗಳಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿ ಕೋಟಾಶ್ರೀನಿವಾಸ ಪೂಜಾರಿ 1 ಲಕ್ಷ 6 ಸಾವಿರದ 233 ಮತಗಳಿಸಿ ಮುನ್ನಡೆಯಲಿದ್ದಾರೆ. ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ 64 ಸಾವಿರದ 519 ಮತ ಗಳಿಸಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 1 ಲಕ್ಷ 95 ಸಾವಿರದ 538 ಮತಗಳಿಸಿದ್ದಾರೆ. ಕಾಂಗ್ರೆಸ್ನ ಶ್ರೇಯಸ್ ಪಟೇಲ್ 1 ಲಕ್ಷದ 90 ಸಾವಿರದ 337 ಮತಗಳಿಸಿ ಗೆದ್ದಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿಗೆ ಗೆಲುವಿನ ನಗು
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಜಯಭೇರಿ ಬಾರಿಸಿದ್ದು, ಚೊಚ್ಚಲ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ. ಹಾಲಿ ಸಂಸದ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಹೀನಾಯ ಸೋಲುಂಡಿದ್ದಾರೆ. ಪ್ರಿಯಾಂಕಾ 80 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಕಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243