ದಿನದ ಸುದ್ದಿ
‘ತಾಯಿ ಹೃದಯಿ’ ಸುಧಾಮೂರ್ತಿ : ಎಚ್.ಡಿ.ಕೆ
ಸುದ್ದಿದಿನ, ಮೈಸೂರು : ಉತ್ಸವಕ್ಕೆ ಪೂಜೆ ಸಲ್ಲಿಸಿ ಸುಧಾಮೂರ್ತಿ ಅವರು ದಸರೆಯ ಮಹತ್ವ ತಿಳಿಸಿದ್ದಾರೆ. ನಾಡಿನಲ್ಲಿ ನಾ ಕಂಡ ಅಪರೂಪದ ಮಹಿಳೆ ಅವರು. ತಾಯಿ ಹೃದಯ ಹೊಂದಿರುವ ಮಹಿಳೆ ಎಂದು ಹೃದಯ ತುಂಬಿ ಹೇಳುವೆ ಎಂದು ದಸರಾ ಉದ್ಘಾಟನೆ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಾಡ ನಾಡ ಅಧಿದೇವತೆಗೆ ಸುಧಾಮೂರ್ತಿ ಪೂಜೆ ಸಲ್ಲಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತೆ ಎಂಬುದು ನಂಬಿಕೆ.ಪ್ರತಿಯೊಬ್ಬ ಮಾನವ ಜೀವಿಗೆ ಬೇಕಿರುವುದು ತಾಯಿ ಹೃದಯ.ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ 25 ಕೋಟಿ ರೂ ಹಣ ಘೋಷಣೆ ವಿಚಾರವಾಗಿ ಮಾತನಾಡಿದರು. ಇದು ಹೊಸದಾಗಿ ಅವರು ನೀಡುತ್ತಿರುವ ಕಾರ್ಯಕ್ರಮವಲ್ಲ. ಅತ್ಯಂತ ಸರಳಜೀವಿ ನಾರಾಯಣಮೂರ್ತಿ ದಂಪತಿ ಮಾದರಿ ಎಂದು ಬಣ್ಣಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401