ದಿನದ ಸುದ್ದಿ

‘ಚಾಮುಂಡೇಶ್ವರಿ ವರ ಪುತ್ರ’ ಎಚ್.ಡಿ‌.ಕೆ : ಸಚಿವ ಜಿ.ಟಿ.ದೇವೇಗೌಡ

Published

on

ಸುದ್ದಿದಿನ, ಮೈಸೂರು : ಚಾಮುಂಡೇಶ್ವರಿಯ ವರ ಪುತ್ರ ಸಿಎಂ ಕುಮಾರಸ್ವಾಮಿ ಅವರು ವೈವಿಧ್ಯಮಯವಾಗಿ ದಸರಾ ಆಚರಣೆ ಮಾಡಲು ತೀರ್ಮಾನ ಮಾಡಿದರು. ಮೊದಲ ಬಾರಿಗೆ ಹೈಪವರ್ ಕಮಿಟಿ ಸಭೆಯನ್ನ ಮೈಸೂರಿನಲ್ಲೇ ನಡೆಸಿದರು‌ ಸಚಿವ ಜಿ‌.ಟಿ ದೇವೇಗೌಡ ಹೇಳಿದರು.

ಇಡೀ ದೇಶದಲ್ಲೇ ಆದರ್ಶ ಮಹಿಳೆಯಾಗಿರುವ ಸುಧಾ ಮೂರ್ತಿ ಅವರು ದಸರಾ ಉದ್ಘಾಟನೆ ಮಾಡಿದ್ದಾರೆ. ಅವರಿಗೆ ಜನರ ಸೇವೆ ಮಾಡುವ ಶಕ್ತಿಯನ್ನ ದೇವರು ಕರುಣಿಸಲಿ‌ ಎಂದರು.

ದಸರಾಗೆ ಕೈ ನಾಯಕರ ಮುನಿಸು

ದಸರಾ ಮಹೋತ್ಸದ ಉದ್ಘಾಟನೆಯಿಂದ ದೂರ ಉಳಿದರು ಕೈ ನಾಯಕರು. ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಿರಲಿಲ್ಲ. ಕೇವಲ ಸಚಿವೆ ಜಯಮಾಲಾ ಹೊರತುಪಡಿಸಿ ಮತ್ಯಾರು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೊಂಡ ದಸರಾದಲ್ಲಿ ಸಂಸದ ಧೃವನಾರಾಯಣ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ತನ್ವೀರ್, ಅನೀಲ್ ಚಿಕ್ಕಮಾದು‌ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version