ದಿನದ ಸುದ್ದಿ

ಕೃಷಿ ಬ್ರಹ್ಮ, ನಾಡೋಜ ಎಲ್.ನಾರಾಯಣ ರೆಡ್ಡಿ ವಿಧಿವಶ

Published

on

ಸುದ್ದಿದಿನ ಡೆಸ್ಕ್ : ಸಾವಯವ ಸಂತ, ಕೃಷಿ ಪಂಡಿತ, ನಾಡೋಜ ಪ್ರಶಸ್ತಿ ವಿಜೇತ ಎಲ್.ನಾರಾಯಣ ರೆಡ್ಡಿ (80) ಯವರು ಸೋಮವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ವಗ್ರಾಮ ಮರೇನಹಳ್ಳಿಯಲ್ಲಿ ವಿಧಿವಶರಾದರು.

ಮೂರು ಗಂಡು ಮಕ್ಕಳು ಮತ್ತು ಪತ್ನಿ ಯನ್ನು ಅಗಲಿದ್ದಾರೆ.ಸೋಮವಾರ ಸಂಜೆ 4 ಗಂಟೆಗಳ ನಂತರ ವರ್ತೂರಿನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇವರ ಕೃಷಿ ಸೇವೆ ಗೆ ಹಂಪಿ ವಿಶ್ವವಿದ್ಯಾಲಯ ಪ್ರತಿಷ್ಠಿತ ಗೌರವ ಡಾಕ್ಟರೇಟ್ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸಾವಯವ ಕೃಷಿಯ ಬಗ್ಗೆ ವಿವಿಧ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡುತ್ತಿದ್ದರು.‌ಇಂಗ್ಲೀಷ್,ಜರ್ಮನ್ ಹೀಗೆ ಹಲವಾರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು.

ಪೂರ್ಣ ಚಂದ್ರ ತೇಜಸ್ವಿಯವರ ಸಹಜ ಕೃಷಿ ಪುಸ್ತಕದಲ್ಲಿ ಇವರ ಬಗ್ಗೆ ಉಲ್ಲೇಖವಿರುವುದನ್ನು ಇಲ್ಲಿ ಸ್ಮರಿಸಬಹುದು. ಸರಳತೆಯ, ಗೋ ಆಧಾರಿತ ಕೃಷಿಯ ರಾಸಾಯನಿಕ ಮುಕ್ತ ಕೃಷಿಯ ಹರಿಕಾರ ನಮ್ಮ ಗುರುಗಳು ಅದ ನಾಡೋಜ ಡಾಕ್ಟರ್ ನಾರಾಯಣ ರೆಡ್ಡಿ ವಿಧಿವಶರಾಗಿದ್ದಾರೆ.

ರೈತ ಸಮೂಹಕ್ಕೆ ಮಾದರಿಯಾಗಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿ ರೈತರಿಗೆ ಒಂದು ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿನ ಜ್ಞಾನಾರ್ಜನೆ ಕೊಡುತ್ತಿದ್ದ ಅವರ ಕೊಡುಗೆ ಅವಿಸ್ಮರಣೀಯ. ಇಳಿ ವಯಸ್ಸಿನಲ್ಲೂ ಅವರು ತರಬೇತಿ ಕಾರ್ಯಕ್ರಮ ಗಳನ್ನು ನಡೆಸುತ್ತಾ ಎಲ್ಲಾ ರೈತ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.

ಅವರ ಜ್ಞಾನದ ಪುಸ್ತಕಗಳು, ಹಂಚಿದ ಜ್ಞಾನ ಕೋಟ್ಯಂತರ ರೈತರಿಗೆ ಮಾದರಿಯಾಗಿ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತಾ ಅವರಿಗೆ ಗೌರವ ಪೂರ್ವಕ ವಿದಯಾಗಳ ಅರ್ಪಿಸೋಣ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version