ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ (ಎಂ.ಪಿ.ಎಂ)

Published

on

ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ರವರು ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ (ಎಮ್ ಪಿ ಎಮ್) ನ್ನು 1936 ರಲ್ಲಿ ಸ್ಥಾಪಿಸಿದರು. ಇದನ್ನು ಅಂದಿನ 1017ರ ಮೈಸೂರು ಕಂಪನಿಗಳ ಅಧಿನಿಯಮದ ನಿಯಮ 08ರ ಅಡಿಯಲ್ಲಿ 20 ಮೇ 1936 ರಂದು ರಿಜಿಸ್ಟಾರ್ ಮಾಡಲಾಯಿತು.

ಬಳಿಕ 1977ರಲ್ಲಿ ಸರ್ಕಾರಿ ಕಂಪನಿಯಾಗಿ ಬದಲಾಯಿತು. ಕಂಪನಿಯ ನೋಂದಾಯಿತ ಕಛೇರಿ ಬೆಂಗಳೂರಿನಲ್ಲಿದೆ ಮತ್ತು ಅದರ ಘಟಕ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿದೆ.

ಕರ್ನಾಟಕ ಸರ್ಕಾರ ಕಂಪನಿಯ 65% ಷೇರನ್ನು ಹೊಂದಿದೆ. ಐಡಿಬಿಐ ಮತ್ತು ಇತರೆ ಹಣಕಾಸು ಸಂಸ್ಥೆಗಳು 18% ಷೇರನ್ನು ಹೊಂದಿವೆ ಮತ್ತು 17%ರಷ್ಟು ಸಾರ್ವಜನಿಕರ ಷೇರುಗಳಿವೆ. 306 ಜನ ನೌಕರರು, 250 ಗುತ್ತಿಗೆದಾರರು ಸೇರಿದಂತೆ ಅನೇಕರು ಇತರೆ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 266 ಎಕರೆ ವ್ಯಾಪ್ತಿಯಲ್ಲಿ ಈ ಉದ್ಯಮ ನಡೆಯುತ್ತಿದೆ.

75 ಸಾವಿರ ಎಕರೆ ಪ್ರದೇಶದಲ್ಲಿ ಅಕೇಶಿಯ, ನೀಲಗಿರಿ ಸೇರಿದಂತೆ ಇತರೆ ಮೆದು ಮರಗಳನ್ನು ಬೆಳೆಯಲಾಗುತ್ತಿದೆ ಮತ್ತು ಅವುಗಳನ್ನು ಕಂಪನಿಗೆ ಕಚ್ಚಾವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಬರವಣಿಗೆ ಮತ್ತು ಮುದ್ರಣಕ್ಕಾಗಿ ಕಾಗದ, ಡ್ರಾಯಿಂಗ್ ಹಾಳೆ ಸೇರಿದಂತೆ ಎಲ್ಲಾ ವಿಧದ ಕಾಗದಗಳನ್ನು, ಎಲ್ಲಾ ವಿಧದ ಗಾತ್ರಗಳಲ್ಲಿ ತಯಾರು ಮಾಡುತ್ತದೆ. ವಾರ್ಷಿಕ 88000 ಮೆಟ್ರಿಕ್ ಟನ್ ಕಾಗದಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು.

ಇದನ್ನೂ ಓದಿ |ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಕೊಡಚಾದ್ರಿ

ಲಾಭದಾಯಕವಾಗಿ ಕೆಲಸ ನಿರ್ವಹಿಸುತ್ತಿದ್ದ ಈ ಕಂಪನಿಯು ಹಲವಾರು ಕಾರಣಗಳಿಂದ ಬರು ಬರುತ್ತ ತನ್ನ ವ್ಯಾಪಾರ ವಹಿವಾಟುಗಳನ್ನು ಕಳೆದುಕೊಂಡು ಮುಚ್ಚುವ ಹಂತಕ್ಕೆ ತಲುಪಿ 2005ರಲ್ಲಿ ರಾಜ್ಯ ಸರ್ಕಾರ ಮುದ್ರಣ ಕಾಗದದ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಜಿಲ್ಲೆಯ ಕೈಗಾರಿಕಾ ನಕಾಶೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ನಿಯಮಿತವು ಭದ್ರಾವತಿ ತಾಲ್ಲೂಕು ಕೇಂದ್ರದಿಂದ 03 ಕಿ.ಮೀ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 22 ಕಿ.ಮೀ ಅಂತರದಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://mpm.karnataka.gov.in

ಕೃಪೆ : Dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version