ದಿನದ ಸುದ್ದಿ
ಮೋದಿ ಸರ್ಕಾರದ ಮುಂದಿರುವ ಸವಾಲುಗಳು…!
ಸ್ನೇಹಿತರೆ,
ಕೇಂದ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದ್ದು ಆಯ್ತು ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು ಆಯಿತು. ಆದರೆ ಈ ಸರ್ಕಾರದ ಮುಂದಿರುವ ಸವಾಲುಗಳು ಆದರೂ ಏನು ಅನುವ ಬಗ್ಗೆ ಒಂದು ಸರಿ ಗಮನ ಹರಿಸೋಣ. ಅಂದಹಾಗೆ ಈ ವಿಷಯವನ್ನು ಓದುವಾಗ ನಿಮ್ಮ ಮನಸ್ಸು ಒಳಗಿನ ರಾಗದ್ವೇಷ ಭಕ್ತಿಭಾವಗಳನ್ನು ಒಂದು ಸ್ವಲ್ಪ ಪಕ್ಕಕ್ಕಿಟ್ಟು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತ ಓದಿರಿ ಹಾಗು ಮಾಡೋದಕ್ಕೆ ಸಾಧ್ಯ ಆಗದೇ ಇದ್ದರೆ ದಯವಿಟ್ಟು ಈ ವಿಷಯವನ್ನು ಓದುವುದಕ್ಕೆ ಹೋಗಬೇಡಿ.
ಮೋದಿ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೇರಿದ ನಂತರ ಜನರ ನಿರೀಕ್ಷೆಗಳು ಹೆಚ್ಚಾಗಿವೆ ಭಾರತದಲ್ಲಿನ ಎಲ್ಲಾ ಸಮಸ್ಯೆಗಳನ್ನು ಮೋದಿ ನಿವಾರಿಸಿ ಬಿಡುತ್ತಾರೆ ಅನ್ನೋ ಆಸೆ ನಿರೀಕ್ಷೆ ಕೋಟಿ ಕೋಟಿ ಜನರ ಮನಸ್ಸಲ್ಲಿದೆ.
ರಾಮಮಂದಿರ ನಿರ್ಮಾಣ, ಆರ್ಟಿಕಲ್ ತ್ರೀ ಸೆವೆಂಟಿ, ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರದ ನಿರ್ಮಾಣ, ಇವತ್ತು ಭಾರತ ಸರ್ಕಾರದ ಮುಂದಿನ ಆದ್ಯತೆಗಳೇನು ಮೋದಿ ಸಚಿವ ಸಂಪುಟದ ಎದುರು ಸವಾಲುಗಳೇನು ಅನ್ನೋದಷ್ಟೇ ನಾವು ಗಮನಿಸಿದರೆ ಮೊಟ್ಟಮೊದಲನೆಯದಾಗಿ ಮತ್ತು ಭಯಾನಕವಾಗಿ ಈ ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ!
ಮುಂದಿನ 20 20 ರ ಹೊತ್ತಿಗೆ ಭಾರತದಲ್ಲಿನ ನಿರುದ್ಯೋಗಿಗಳ ಸಂಖ್ಯೆ 44% ಏರುತದ್ದೆ, ಇದು ವಿದ್ಯಾವಂತ ನಿರುದ್ಯೋಗಿಗಳ ಕಥೆ ಇನ್ನು ಗ್ರಾಮೀಣ ಭಾಗದಿಂದ ವಲಸೆ ಬರುತ್ತಿರುವ ಕೃಷಿ ನಿರಾಶ್ರಿತರನ್ನು ಸೇರಿಸಿಲ್ಲ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಸರ್ಕಾರದ ಮುಂದಿರುವ ಚಾಲೆಂಜ್ ಗಳು ಅಂದರೆ ಗ್ರಾಮೀಣ ವಲಸೆಯನ್ನು ತಡೆದು ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕೆ ಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಜೊತೆಗೆ ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ತಗ್ಗಿಸಿ ಜಿಡಿಪಿಯನ್ನು ಹೆಚ್ಚಿಸಬೇಕು. ಜವಾಬ್ದಾರಿ ಸರ್ಕಾರದ ಮೇಲಿದೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿದು ಹೋಗುತ್ತಿರುವುದು ನಮಗೂ ತಡೆಯಬೇಕಿದೆ .
ಇವತ್ತಿನವರೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಆದರೆ ಈ ಕೂಡಲೇ ಸರಿಪಡಿಸಬೇಕಿದೆ. ಭಾರತ ಕೃಷಿ ಪ್ರಧಾನ ದೇಶ ಆದರೆ ದುರಂತ ಅಂದ್ರೆ ಇಲ್ಲಿ ಅನ್ನ ಕೊಡುವ ರೈತನಿಗೆ ಹೊಟ್ಟೆ ತುಂಬಾ ಊಟ ಸಿಗದ ಪರಿಸ್ಥಿತಿ. ಇದು ಬಿಜೆಪಿ ಸರ್ಕಾರದ ವಿಷಯಕ್ಕೆ ಬರೋದಾದ್ರೆ, ಶ್ರೀಮಂತರು ಹಾಗೂ ಉದ್ಯಮಿಗಳ ಸರ್ಕಾರ ಅನ್ನೋ ಆರೋಪವೂ ಇದೆ.
ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರದ ಚೇತರಿಕೆಗೆ ಆದ್ಯತೆಯನ್ನು ಕೊಡಬೇಕು ಅದು ವರ್ಷಕ್ಕೆ rs.6000 ಕೊಡುವುದರಿಂದ ಅಥವಾ ಸಾಲಮನ್ನಾ ಮಾಡುವ ಘೋಷಣೆಗಳಿಂದ ಕೃಷಿಕ್ಷೇತ್ರ ಸುಧಾರಣೆ ಆಗೋದಿಲ್ಲ. ರೈತರಿಗೆ ಕರೆಂಟು ನೀರು ಸೂಕ್ತ ಬೆಳೆ ಕುರಿತಾದ ಮಾಹಿತಿ ತಂತ್ರಜ್ಞಾನ ಕೊಡಬೇಕಾಗಿದೆ .
ಕೃಷಿ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳು ಬೆಲೆ ನಿಯಂತ್ರಣ ಕೃಷಿ-ಆಧಾರಿತ ಉದ್ದಿಮೆಗಳು ಹೀಗೆ ಇನ್ನೇನೋ ಆಗಬೇಕಿದೆ. ಇವತ್ತು ಸೇನೆಯನ್ನು ಬಲಪಡಿಸಲು ಬೇಕಾಗಿರುವುದು ,ಭಾರತದಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳು ಸ್ಥಾಪನೆಗೊಳ್ಳಬೇಕಿದೆ. ಆ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುತ್ತೆ ಸಾಕಷ್ಟು ಚಿಕ್ಕ ಕೈಗಾರಿಕೆಗಳು ಹುಟ್ಟುವುದಕ್ಕೆ ಸಾಧ್ಯವಾಗುತ್ತೆ ನಿರುದ್ಯೋಗ ನಿವಾರಣೆಗೆ ಕೂಡ ಆಗುತ್ತೆ ಹಾಗೆ ಪೆಟ್ರೋಲಿಯಂ ಮೇಲಿನ ಅತಿಯಾದ ಆಮದು ಮಾಡುವುದನ್ನು ನಿಲ್ಲಿಸಿ
ಪರ್ಯಾಯ ಮಾರ್ಗ ಹುಡುಕ ಬೇಕಾದ ಅನಿವಾರ್ಯತೆ ಕೂಡ ಸರ್ಕಾರದ ಮೇಲಿದೆ.
ಆಂತರಿಕ ಭದ್ರತೆ ಹಾಗೂ ಬಾಹ್ಯ ಶಕ್ತಿಗಳ ನಿಯಂತ್ರಣ ಭಯೋತ್ಪಾದನೆ ನಿರ್ಮೂಲನೆ ಬಡತನದ ವಿರುದ್ಧ ಹೋರಾಟ ಕಡಿಮೆ ಏನು ?
ಅಮೇರಿಕಾ ಮೊನ್ನೆ ತಾನೇ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಿದೆ.
ಆದರಿಂದ ಭಾರತ ಅಮೇರಿಕಾದಿಂದ ಆಮದು ಮಾಡುತಿದ್ದ ಸುಮಾರು ೨೦೦೦ ವಸ್ತುಗಳ ಮೇಲೆ ತೆರಿಗೆ ಬೀಳಲಿದೆ, ಇದರಿಂದ ಭಾರತಕ್ಕೆ ಆಗುವ ನಷ್ಟ ಕಡಿಮೆ ಏನಿಲ್ಲ .
ನಾವು ಗಮನಿಸಿದರೆ ಭಾರತ ವಿದೇಶಾಂಗ ನೀತಿಯನ್ನು ರೂಪಿಸುವಾಗ ಎಚ್ಚರಿಕೆವಹಿಸಬೇಕಾಗಿದೆ ಅನ್ನೋದು ಸ್ಪಷ್ಟ. ಚೀನಾ ಹಾಗೂ ಪಾಕಿಸ್ತಾನಗಳ ಕಂಟ್ರೋಲ್ ಮಾಡಿದ ಮೋದಿ ಸರ್ಕಾರ ಈ ಬಾರಿನೂ ಅಷ್ಟೇ ಪ್ರಭಾವಿಯಾಗಿ ಚೀನಾ ಅನ್ನೋ ಶತ್ರುವನ್ನು ನಿಯಂತ್ರಿಸುತ್ತಾ ಅದನ್ನು ಮಾಡೋದಕ್ಕೆ ಅಮೆರಿಕಾದ ಬೆಂಬಲ ಬೇಕೇ ಬೇಕು ಅಂತ ಸ್ನೇಹವನ್ನ ಕಳೆದುಕೊಳ್ಳುವುದಕ್ಕೆ ಆಗೋದಿಲ್ಲ.
ಈಗಾಗಲೇ ಒಂದು ಸಮಸ್ಯೆ ಶುರುವಾಗಿದೆ,
ದೊಡ್ಡಣ್ಣನ ಸ್ನೇಹ ವಹಿಸುವುದಕ್ಕೆ ಭಾರತ ತನ್ನ ಹಳೆಯ ಮಿತ್ರ ದೇಶ ಇರಾನ್ ಜೊತೆಗಿನ ಪೆಟ್ರೋಲಿಯಂ ವ್ಯವಹಾರವನ್ನು ನಿಲ್ಲಿಸಿದೆ.
ಇದೀಗ ಭಾರತ ತನ್ನ ವಿದೇಶ ವ್ಯವಹಾರವನ್ನು ಯೋಚಿಸಿ ಹೆಜ್ಜೆಯಿಡ ಬೇಕಾಗಿದೆ.
ಈಗ ನಾವು ಕಾದು ನೋಡಬೇಕಿದೆ ರಾಮಮಂದಿರ ಅದನ್ನ ನ್ಯಾಯಾಲಯ ನಿರ್ಧಾರ ಮಾಡುತ್ತೆ ,ಆರ್ಟಿಕಲ್ 370, ಸಮಾನ ನಾಗರಿಕ ಸಂಹಿತೆ ಇದೆಲ್ಲ ಬಿಜೆಪಿಗೆ ಮತ ತಂದುಕೊಟ್ಟ ಅಂಶಗಳಾಗಿವೆ. ನಿರುದ್ಯೋಗ ಹಣದುಬ್ಬರ ಆರ್ಥಿಕ ಅಭಿವೃದ್ಧಿ ಇವುಗಳಿಗೆ ಹೋಲಿಸಿದರೆ ಮೋದಿ ಸರ್ಕಾರದ ಆದ್ಯತೆ ಸಶಕ್ತ ಭಾರತದ ನಿರ್ಮಾಣಕ್ಕಾಗಿ ಒಂದಾಗಿದೆ.
ಇದು ಮೋದಿ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳು. ಇವೆಲ್ಲವನ್ನ ನರೇಂದ್ರ ಮೋದಿಯವರ ಸಚಿವ ಸಂಪುಟ ಹೇಗೆ ನಿಭಾಯಿಸುತ್ತದೆ ಎಂದು ಕಾದುನೋಡಬೇಕು.
ಜೈ ಹಿಂದ್ ಜೈ ಕರ್ನಾಟಕ
–ಮನನ್ ಜೈನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243