ರಾಜಕೀಯ

ಅಜಾತಶತ್ರು ವಾಜಪೇಯಿ ಹೆಸರು ಶಾಶ್ವತಗೊಳಿಸಲು ನಿರ್ಧಾರ: ಇಲ್ಲಿದೆ ಓದಿ ಮಾಹಿತಿ

Published

on

  • ಅಜಾತಶತ್ರು ವಾಜಪೇಯಿ ಹೆಸರು ಶಾಶ್ವತಗೊಳಿಸಲು ನಿರ್ಧಾರ
  • ಮಹತ್ವದ ನಿರ್ಧಾರ ತೆಗೆದುಕೊಂಡ ಛತ್ತೀಸ್​ಘಡ ಸರ್ಕಾರ
  • ವಾಜಪೇಯಿ ಪ್ರತಿಮೆಸ್ಥಾಪನೆಗೆ ಮುಂದು

ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಿ, ಅಜಾತಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಶಾಶ್ವತಗೊಳಿಸುವ ಕಾರ್ಯಕ್ಕೆ ಛತ್ತೀಸ್​ಘಡ ಸರ್ಕಾರ ಮುಂದಾಗಿದೆ.

ಹೌದು, ಛತ್ತೀಸ್​ಘಡದಲ್ಲಿ ನಿನ್ನೆ ನಡೆದ ಕ್ಯಾಬಿನೆಟ್​​ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಛತ್ತೀಸ್​ಘಡ ರಾಜಧಾನಿ ರಾಯಪುರ್​ ಎಂಬ ಹೆಸರನ್ನ ಅಟಲ್​ ನಗರ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಛತ್ತೀಸ್​ಘಡ ಸಿಎಂ ರಮಣ್​ಸಿಂಗ್ ಘೋಷಿಸಿದ್ದಾರೆ. ಹೊಸ ರಾಯಪುರವನ್ನ ಅಟಲ್​ ನಗರವೆಂದು ಕರೆಯಲಾಗುವುದು ಎಂದು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ವಾಜಪೇಯಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದಾಗಿ ತಿಳಿಸಿದ್ದಾರೆ. ಅ.1ರಂದು ಅಟಲ್ ಬಿಹಾರಿ ವಾಜಪೇಯಿ ಸುಶಾಸನ್ ಪ್ರಶಸ್ತಿ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.

Web title: Chhattisgarh Chief Minister Raman Singh on Tuesday declared that Naya Raipur shrewd city, will be renamed ‘Atal Nagar’ out of appreciation for previous Prime Minister Atal Bihari Vajpaye

Leave a Reply

Your email address will not be published. Required fields are marked *

Trending

Exit mobile version