ರಾಜಕೀಯ
ಅಜಾತಶತ್ರು ವಾಜಪೇಯಿ ಹೆಸರು ಶಾಶ್ವತಗೊಳಿಸಲು ನಿರ್ಧಾರ: ಇಲ್ಲಿದೆ ಓದಿ ಮಾಹಿತಿ
- ಅಜಾತಶತ್ರು ವಾಜಪೇಯಿ ಹೆಸರು ಶಾಶ್ವತಗೊಳಿಸಲು ನಿರ್ಧಾರ
- ಮಹತ್ವದ ನಿರ್ಧಾರ ತೆಗೆದುಕೊಂಡ ಛತ್ತೀಸ್ಘಡ ಸರ್ಕಾರ
- ವಾಜಪೇಯಿ ಪ್ರತಿಮೆಸ್ಥಾಪನೆಗೆ ಮುಂದು
ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಿ, ಅಜಾತಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಶಾಶ್ವತಗೊಳಿಸುವ ಕಾರ್ಯಕ್ಕೆ ಛತ್ತೀಸ್ಘಡ ಸರ್ಕಾರ ಮುಂದಾಗಿದೆ.
ಹೌದು, ಛತ್ತೀಸ್ಘಡದಲ್ಲಿ ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಛತ್ತೀಸ್ಘಡ ರಾಜಧಾನಿ ರಾಯಪುರ್ ಎಂಬ ಹೆಸರನ್ನ ಅಟಲ್ ನಗರ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಛತ್ತೀಸ್ಘಡ ಸಿಎಂ ರಮಣ್ಸಿಂಗ್ ಘೋಷಿಸಿದ್ದಾರೆ. ಹೊಸ ರಾಯಪುರವನ್ನ ಅಟಲ್ ನಗರವೆಂದು ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದಾಗಿ ತಿಳಿಸಿದ್ದಾರೆ. ಅ.1ರಂದು ಅಟಲ್ ಬಿಹಾರಿ ವಾಜಪೇಯಿ ಸುಶಾಸನ್ ಪ್ರಶಸ್ತಿ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
Web title: Chhattisgarh Chief Minister Raman Singh on Tuesday declared that Naya Raipur shrewd city, will be renamed ‘Atal Nagar’ out of appreciation for previous Prime Minister Atal Bihari Vajpaye