ಸಿನಿ ಸುದ್ದಿ
ನಟಿ ಶ್ರೀರೆಡ್ಡಿ ಮಂಚಕ್ಕೆ ಬರಲು ಆಕೆಯೇ ತಯಾರಿದ್ದಾಳೆ | ದೂರು ದಾಖಲು
ಸುದ್ದಿದಿನ ಡೆಸ್ಕ್ | ತೆಲುಗು ನಟಿ ಶ್ರೀ ರೆಡ್ಡಿ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಸದಾ ಸುದ್ದಿ ಮಾಡುತ್ತಾ ತಮಗಾದ ಅನ್ಯಾಯಕ್ಕೆ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಆದರೆ ಈಗ ಶ್ರೀ ರೆಡ್ಡಿ ಸುದ್ದಿಯಲ್ಲಿರುವುದು ಆರೋಪಿರೂಪದಲ್ಲಿ.
ಅಂದಹಾಗೆ ಈ ನಟಿಯ ಒಂದು ಚಿಕ್ಕ ಫ್ಲಾಶ್ ಬ್ಯಾಕ್ ನೋಡೋದಾದ್ರೆ, ಶ್ರೀ ರೆಡ್ಡಿಯು ಎ.ಆರ್.ಮುರಗಡೋಸ್, ಲಾರೆನ್ಸ್ ರಾಘವೇಂದ್ರ ಮತ್ತು ನಟ ಶ್ರೀಕಾಂತ್ ಸೇರಿದಂತೆ ಹಲವು ನಿರ್ಮಾಪಕರು ಸಿನೆಮಾಗಳಲ್ಲಿ ಅವಕಾಶ ಕೊಡುವುದಾಗಿ ಹೇಳಿ ನನ್ನನ್ನು ದೈಹಿಹವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು ಈ ನಟಿ.
ಆದರೆ ನಟಿಯ ಈ ಆರೋಪಗಳೆಲ್ಲವೂ ಸುಳ್ಳು ಎಂದು ಆಕ್ರೋಶವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ‘ವರಾಹಿ’ ಅವರು, “ಯಾವುದೇ ಸಾಕ್ಷಾಧಾರವಿಲ್ಲದೆ ನಟಿ ಶ್ರೀರೆಡ್ಡಿ ಆರೋಪಮಾಡಿದ್ದಾಳೆ, ಆಕೆಯ ಮುಖ್ಯ ಉದ್ದೇಶ ಏನೆಂದರೆ ಜನಪ್ರಿಯ ನಟರುಗಳ ಹೆಸರು ಕೆಡಿಸುವಂತೆ ತೋರುತ್ತದೆ”.
ಕೇವಲ ಹಣ ಮಾಡುವದಕ್ಕಾಗಿಯೇ ಈಕೆ ಉದ್ದೇಶಪೂರ್ವಕವಾಗಿ ಬೆದರಿಕೆಯಾಕಲು ಬಯಸುತ್ತಾಳೆ. ಹಾಗೇ ಆಕೆ ಹಲವರೊಂದಿಗೆ ಮಂಚಕ್ಕೆ ಬರಲು ಒಪ್ಪಿದ್ದಾಳೆ.
ಈಕೆಯ ಈ ನಡತೆ ವೇಶ್ಯಾವಾಟಿಕೆಗೆ ಕಾರಣವಾಗಿದೆ. ಕೂಡಲೇ ಆಕೆಯನ್ನು ಬಂಧಿಸ ಬೇಕು ಎಂದು ಆರೋಪಿಸಿ ನಟಿ ಶ್ರೀರೆಡ್ಡಿ ವಿರುದ್ಧ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986815401