ದಿನದ ಸುದ್ದಿ

ದೇಶದ ಸಮಗ್ರತೆ ಮತ್ತು ಐಕ್ಯತೆ ವಿಚಾರದಲ್ಲಿ ರಾಜಿಯಿಲ್ಲ : ಪ್ರಧಾನಮಂತ್ರಿ ನರೇಂದ್ರ ಮೋದಿ

Published

on

ಸುದ್ದಿದಿನ ಡೆಸ್ಕ್ : ದೇಶದ ಸಮಗ್ರತೆ ಮತ್ತು ಐಕ್ಯತೆ ವಿಚಾರದಲ್ಲಿ ರಾಜಿಯಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ನಾಗರಿಕ ಸೇವಾ ದಿನದಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ’ನೇಷನ್ ಫಸ್ಟ್’ ಎಂಬ ಮಂತ್ರದೊಂದಿಗೆ ನಾವಿನ್ಯತೆಯ ಹಾದಿಯನ್ನು ಅನುಸರಿಸಿದ ಎಲ್ಲರೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಾಗರಿಕ ಸೇವಾ ಸಿಬ್ಬಂದಿ ಗುರಿಯಾಗಲಿ ಎಂದು ಹೇಳಿದರು.

ಆಡಳಿತ ಸುಧಾರಣೆಯ ಮೂಲಕ ಜನರ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಾಗರಿಕ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ದೇಶದ ಪ್ರತಿ ಜಿಲ್ಲೆ ಮುಂದಿನ 25ವರ್ಷಗಳ ಗುರಿ ನಿಗದಿಪಡಿಸಬೇಕು. ಕಳೆದ 8 ವರ್ಷಗಳಲ್ಲಿ ಸರ್ಕಾರದ ಕೈಗೊಂಡ ಅನೇಕ ಕ್ರಮಗಳಿಂದ ಜನರ ಜೀವನದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿವೆ ಎಂದು ಪ್ರಧಾನಿ ಹೇಳಿದರು. 2022ರಲ್ಲಿ ಮೂರು ತಿಂಗಳಲ್ಲಿ ದೇಶ 14ಯುನಿಕಾರ್ನ್ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಿದ್ದು ಇದು ದೇಶದ ಪ್ರಮುಖ ಸಾಧನೆ ಎಂದು ಪ್ರಧಾನಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version