ದಿನದ ಸುದ್ದಿ
ದೇಶದ ಸಮಗ್ರತೆ ಮತ್ತು ಐಕ್ಯತೆ ವಿಚಾರದಲ್ಲಿ ರಾಜಿಯಿಲ್ಲ : ಪ್ರಧಾನಮಂತ್ರಿ ನರೇಂದ್ರ ಮೋದಿ
ಸುದ್ದಿದಿನ ಡೆಸ್ಕ್ : ದೇಶದ ಸಮಗ್ರತೆ ಮತ್ತು ಐಕ್ಯತೆ ವಿಚಾರದಲ್ಲಿ ರಾಜಿಯಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ನಾಗರಿಕ ಸೇವಾ ದಿನದಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ’ನೇಷನ್ ಫಸ್ಟ್’ ಎಂಬ ಮಂತ್ರದೊಂದಿಗೆ ನಾವಿನ್ಯತೆಯ ಹಾದಿಯನ್ನು ಅನುಸರಿಸಿದ ಎಲ್ಲರೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಾಗರಿಕ ಸೇವಾ ಸಿಬ್ಬಂದಿ ಗುರಿಯಾಗಲಿ ಎಂದು ಹೇಳಿದರು.
ಆಡಳಿತ ಸುಧಾರಣೆಯ ಮೂಲಕ ಜನರ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಾಗರಿಕ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ದೇಶದ ಪ್ರತಿ ಜಿಲ್ಲೆ ಮುಂದಿನ 25ವರ್ಷಗಳ ಗುರಿ ನಿಗದಿಪಡಿಸಬೇಕು. ಕಳೆದ 8 ವರ್ಷಗಳಲ್ಲಿ ಸರ್ಕಾರದ ಕೈಗೊಂಡ ಅನೇಕ ಕ್ರಮಗಳಿಂದ ಜನರ ಜೀವನದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿವೆ ಎಂದು ಪ್ರಧಾನಿ ಹೇಳಿದರು. 2022ರಲ್ಲಿ ಮೂರು ತಿಂಗಳಲ್ಲಿ ದೇಶ 14ಯುನಿಕಾರ್ನ್ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಿದ್ದು ಇದು ದೇಶದ ಪ್ರಮುಖ ಸಾಧನೆ ಎಂದು ಪ್ರಧಾನಿ ಹೇಳಿದರು.
Being a vibrant democracy, we have to focus on these three things:
Bring a positive change in the lives of the common citizens.
Embrace the transformations going on across the world. Outdated mindsets will no longer help.
Further the spirit of national unity and integration. pic.twitter.com/QANI2FYzKF
— Narendra Modi (@narendramodi) April 21, 2022
Here is how our officers can strengthen the Azadi Ka Amrit Mahotsav and add greater strength to India’s development journey. pic.twitter.com/XlVyWLfCbr
— Narendra Modi (@narendramodi) April 21, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243