ದಿನದ ಸುದ್ದಿ

ತೇಜಸ್ವಿ ಹೆಸರಲ್ಲಿ ಕಾದಂಬರಿ ಪುರಸ್ಕಾರ

Published

on

ಪೂರ್ಣಚಂದ್ರ ತೇಜಸ್ವಿ

ಯುವಕರೇ ಸೇರಿ ಹೊಸ ಕನಸು ಮತ್ತು ಭರವಸೆಗಳೊಂದಿಗೆ ‘ನಿರುತ್ತರ ಪುಸ್ತಕ’ ಎಂಬ ಪ್ರಕಾಶನ ಸಂಸ್ಥೆ ಯನ್ನು ಕಟ್ಟಿದ್ದೇವೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ. ಇದರ ಸಲುವಾಗಿ ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ’ ವನ್ನು ಪ್ರತಿವರ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದ ಪುರಸ್ಕಾರಕ್ಕೆ ಕಾದಂಬರಿಯ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಕರು ಆಗಸ್ಟ್ 15|2018 ರ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ.

ನಿಯಮಗಳು

  • ಲೇಖಕರ ವಯಸ್ಸು 45 ವರ್ಷ ಮೀರಿರಬಾರದು
    ಕಾದಂಬರಿಯು ಬೇರೆಲ್ಲೂ ಪ್ರಕಟವಾಗಿರಬಾರದು.
  • ಹಸ್ತಪ್ರತಿಯ ಯಾವ ಭಾಗದಲ್ಲೂ ಲೇಖಕರ ಹೆಸರು ಮತ್ತು ಇತರೆ ಮಾಹಿತಿಗಳನ್ನು ನಮೂದಿಸಬಾರದು.
  • ಕಾದಂಬರಿಗೆ ಪುಟಗಳ ಮಿತಿ ಇರುವುದಿಲ್ಲ.
    ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.
  • ತೀರ್ಪಿನ ಮಧ್ಯೆ ಯಾವುದೇ ಪತ್ರವ್ಯವಹಾರವಿರುವುದಿಲ್ಲ.
  • ಕಾದಂಬರಿಯನ್ನು ನುಡಿ ತಂತ್ರಾಂಶದಲ್ಲಿ ಟೈಪಿಸಿ ಪ್ರಿಂಟೌಟ್ ತೆಗೆದು ಹಾರ್ಡ್ ಕಾಪಿ ಕಳಿಸಬೇಕು.
  • ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಯನ್ನು ನಿರುತ್ತರ ಪುಸ್ತಕ ಪ್ರಕಟಿಸಿರುತ್ತದೆ. ಪುರಸ್ಕಾರ ಐದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.

ಕಾದಂಬರಿಯನ್ನು ಕಳುಹಿಸಬೇಕಾದ ವಿಳಾಸ

ನಿರುತ್ತರ ಪುಸ್ತಕ
ನಂ:13
ಒಂದನೇ ಮುಖ್ಯರಸ್ತೆ
ಎರಡನೇ ಅಡ್ಡರಸ್ತೆ
ಮಲ್ಲತ್ತಹಳ್ಳಿ
ಬೆಂಗಳೂರು-56

ಮಾಹಿತಿಗಾಗಿ ಸಂಪರ್ಕಿಸಿ

8495980857
9900903084

Leave a Reply

Your email address will not be published. Required fields are marked *

Trending

Exit mobile version