ದಿನದ ಸುದ್ದಿ
ದೇಶದ ಮಹಿಳೆಯರ ಗೌರವ ಕಾಪಾಡುವುದು ನಮ್ಮ ಮೊದಲ ಆದ್ಯತೆ : ಸಚಿವೆ ಸ್ಮೃತಿ ಇರಾನಿ
ಸುದ್ದಿದಿನ, ಅಸ್ಸಾಂ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಾರಿಗೊಳಿಸಿರುವ ಯೋಜನೆಗಳ ಕುರಿತ ಈಶಾನ್ಯ ವಲಯದ ರಾಜ್ಯ ಸರ್ಕಾರಗಳು ಮತ್ತು ಭಾಗೀದಾರರ ವಲಯ ಸಮಾವೇಶ ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಚಿವಾಲಯ ಜಾರಿಗೊಳಿಸಿರುವ 2.0 ಅಭಿಯಾನ್, ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಮತ್ತಿತರ ಕಾರ್ಯಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ನಮ್ಮ ದೇಶದ ಮಹಿಳೆಯರ ಗೌರವ ಮತ್ತು ಘನತೆ ಕಾಪಾಡುವುದು ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಆರೋಗ್ಯ ಮತ್ತು ಕಾನೂನಿನ ಸಲಹೆ ನೀಡಲು ದೇಶಾದ್ಯಂತ 304ಒನ್ ಸ್ಟಾಪ್ ಸೆಂಟರ್ಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಕಡೆಗಳಲ್ಲಿ ಈ ವರ್ಷ ಇನ್ನೂ 300ಕೇಂದ್ರಗಳನ್ನು ತೆರೆಯಲಾಗುವುದು. ಕಳೆದ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು 70 ಲಕ್ಷ ಮಹಿಳೆಯರಿಗೆ ಸಹಾಯ ದೊರೆತಿದೆ ಎಂದು ಸಚಿವರು ಹೇಳಿದರು.
ಕಳೆದ ವರ್ಷದ ಬಜೆಟ್ನಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಮೀಸಲಿಡಲಾಗಿದ್ದ ಅನುದಾನಕ್ಕಿಂತಲೂ ಶೇಕಡ 14 ರಷ್ಟು ಹೆಚ್ಚಿನ ಅನುದಾನವನ್ನು ಈ ವರ್ಷದ ಬಜೆಟ್ನಲ್ಲಿ ಒದಗಿಸಲಾಗಿದೆ.
ಜನ್ಧನ್ ಯೋಜನೆಯಡಿ 24 ಕೋಟಿ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಮುದ್ರಾ ಯೋಜನೆಯಡಿ ಶೇಕಡ 58ರಷ್ಟು ಹಾಗೂ ಸ್ಟ್ಯಾಂಡ್ಅಪ್ ಇಂಡಿಯಾ ಯೋಜನೆಯಡಿ ಶೇಕಡ 80ರಷ್ಟು ಮಹಿಳೆಯರು ಲಾಭ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಮೃತಿ ಇರಾನಿ ಟ್ವೀಟ್
As part of ongoing series of Zonal Meeting conducted by @MinistryWCD, Guwahati hosted consultations with states and stakeholders of North-East region today on recently announced Missions of Shakti, Poshan 2.0 & Vatsalya. pic.twitter.com/uFhNDFJLa9
— Smriti Z Irani (@smritiirani) April 10, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243