ದಿನದ ಸುದ್ದಿ

ಶೀರೂರು ಶ್ರೀ ಸಾವಿನ ಹಿಂದೆ ವಿಷಕನ್ಯೆ ಕೈವಾಡ ಸಾಧ್ಯತೆ

ಶೀರೂರು ಶ್ರೀಗಳ ಅನುಮಾನಾಸ್ಪದ ಸಾವಿನ ಹಿಂದೆ ವಿಷಕನ್ಯೆಯೊಬ್ಬರ ಕೈ ಚಳಕ ನಡೆದಿರುವ ಎಲ್ಲ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Published

on

ಸುದ್ದಿದಿನ ಡೆಸ್ಕ್: ಶೀರೂರು ಶ್ರೀಗಳ ಅನುಮಾನಾಸ್ಪದ ಸಾವಿನ ಹಿಂದೆ ವಿಷಕನ್ಯೆಯೊಬ್ಬರ ಕೈ ಚಳಕ ನಡೆದಿರುವ ಎಲ್ಲ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶ್ರೀಗಳಿಗೆ ಆಪ್ತರಾಗಿದ್ದ ಭಕ್ತೆಯೊಬ್ಬರು ನೀಡಿದ ಅವಲಕ್ಕಿಯಲ್ಲಿ ವಿಷ ಇತ್ತೆಂದು ಹೇಳಲಾಗುತ್ತಿದ್ದು, ಅದನ್ನು ಸೇವಿಸಿದ ನಂತರ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಶ್ರೀಗಳ ಸಾವಿನ ಪ್ರಕರಣದಲ್ಲಿ ಭೂ ಮಾಫಿಯಾದ ಕೈವಾಡವೂ ಇರಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಡುಪಿಯ ಕಲ್ಸಂಕದಲ್ಲಿ ಮಠದ ಪಟ್ಟದ ದೇವರ ಹೆಸರಿನಲ್ಲಿದ್ದ ಜಾಗವನ್ನು ಗುತ್ತಿಗೆ ನೀಡಿ ನೂರು ಕೋಟಿ ರೂ.ಗೂ ಹೆಚ್ಚಿನ ವ್ಯವಹಾರದ ಪಾಲುದಾರಿಕೆಯಲ್ಲ ಶ್ರೀಗಳು ಕೈಹಾಕಿದ್ದರು. ಕನಕ ಮಾಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮುಂಬಯಿನ ಉದ್ಯಮಿಗಳು ಶ್ರೀಗಳಿಗೆ 26 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ವಿಚಾರವಾಗಿ ಸಾಲದ ಸುಳಿಗೆ ಸಿಕ್ಕಿದ್ದ ಶ್ರೀಗಳು ಅದನ್ನು ಬ್ಯಾಂಕ್‍ಗೆ ವಾಪಸ್ ನೀಡುವ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.

ಮಹಿಳೆ ಜತೆ ಶ್ರೀಗಳ ನಂಟು?

ಶ್ರೀಗಳಿಗೆ ಆಪ್ತರಾಗಿದ್ದ ಉಡುಪಿ ಮೂಲದ ಮಹಿಳೆ ಸುತ್ತ ಪ್ರಕರಣವು ಗಿರಕಿ ಹೊಡೆಯುತ್ತಿದೆ. ಮೂಲಗಳ ಪ್ರಕಾರ ಮಠದ ಹಣಕಾಸು ವ್ಯವಹಾರಗಳನ್ನು ಸಂಪೂರ್ಣವಾಗಿ ಈ ಮಹಿಳೆಯೇ ನಿರ್ವಹಿಸುತ್ತಿದ್ದರು. ಶ್ರೀಗಳಿಂದ ಕಾರೊಂದನ್ನು ಪಡೆದಿದ್ದರು. ಈಕೆ ಫ್ಲಾಟ್ ಕೊಳ್ಳಲು ಶ್ರೀಗಳೇ ಹಣ ನೀಡಿದ್ದರು ಎನ್ನಲಾಗಿದೆ.
ಶ್ರೀಗಳಿಗೆ ಆಪ್ತರಾಗಿದ್ದ ಈ ಮಹಿಳೆಯೇ ಸಾವಿಗೆ ಕಾರಣ. ಮಠದ ಸಂಪೂರ್ಣ ಸ್ವತ್ತನ್ನು ತನ್ನ ಹೆಸರಿಗೆ ಪಡೆಯುವ ಸಲುವಾಗಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಮಠದ ಮಾಜಿ ವ್ಯವಸ್ಥಾಪಕಿಯೊಬ್ಬರು ಹಾಸನದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version