ದಿನದ ಸುದ್ದಿ
ಮುತಾಲಿಕ್ ಹೇಳಿಕೆಗೆ ಟ್ವಿಟರ್ ನಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ..!
ಸುದ್ದಿದಿನ ಡೆಸ್ಕ್ : ಹಿಂದುತ್ವವಾದಿ ಸಂಘಟನೆಯ ಪರಶುರಾಮ್ ವಾಘ್ಮೋರೆ ಗೌರಿಲಂಕೇಶ್ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಹಿನ್ನೆಲೆ, ಶ್ರೀರಾಮಸೇನೆ ಮುಖ್ಯಸ್ಥ ಪರಶುರಾಮ್ ಯಾರೆಂದು ನನಗೆ ಗೊತ್ತಿಲ್ಲ, ಹತ್ಯೆಯ ವಿಚಾರಕ್ಕೂ ನಮ್ಮ ಸಂಘಟನೆಗೂ ಯಾವ ಸಂಬಂಧವೂ ಇಲ್ಲ. ಬೀದಿಯಲ್ಲಿ ಯಾವುದಾದರು ನಾಯಿ ಸತ್ತರೆ ಅದಕ್ಕೆ ನಾವು ಕಾರಣಾನ ಎಂದು ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸಿ ತನ್ನ ಹಿಡಿತವಿಲ್ಲದ ನಾಲಗೆಯನ್ನು ಪ್ರದರ್ಶಿಸಿದ್ದರು.
ಮುತಾಲಿಕ್ ರ ಈ ಹೇಳಿಕೆಗೆ just asking ನ ಪ್ರಕಾಶ್ ರೈ ಟ್ಟೀಟ್ ಮೂಲಕ ಅವರಿಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
SHAME..SHAME..Is supreme leader..his party president and its law makers elated that one more has joined the gang of “ dog remark “ users …who can stoop low..against who ever questions them….or disagree with their ideology…. #justasking…..https://t.co/bVEtLEvgtp
— Prakash Raj (@prakashraaj) June 18, 2018
“ಶೇಮ್..ಶೇಮ್ …ಇವನೊಬ್ಬ ಪರಮೋಚ್ಚ ನಾಯಕ. ಇವನ ಪಕ್ಷದ ಅಧ್ಯಕ್ಷ ಹಾಗೂ ಅದರ ಜನ ಪ್ರತಿನಿಗಳೆಲ್ಲರು ” ನಾಯಿ ಬೈಗುಳ”ದ ಬಳಕೆದಾರರು. ಆ ಗುಂಪಿಗೆ ಮತ್ತೊಬ್ಬರ ಸೇರ್ಪಡೆ. ಇಂಥವರ ವಿರುದ್ಧ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಅಥವಾ ಸೈದ್ಧಾಂತಿಕಭಿನ್ನಾಭಿಪ್ರಾಯ ಹೊಂದಿದ್ರೆ, ಎಂಥ ಕೀಳುಮಟ್ಟಕ್ಕಾದರೂ ಇಳಿಯುತ್ತಾರೆ.”
ಸುದ್ದಿದಿನ.ಕಾಂ|ವಾಟ್ಸಾಪ್|9986715401